“ಪಶು”ಗಳಿಗಾಗಿ ಪಶುಪತಿಹಾಳದಲ್ಲಿ ಪಂಚಾಯತಿಗೆ ಲಗ್ಗೆಯಿಟ್ಟ ದನಕರುಗಳು…!
1 min readಕುಂದಗೋಳ: ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಪಶು ಆಸ್ಪತ್ರೆಯನ್ನ ಒಡೆದು ಹಾಕಿದ್ದರೂ, ಇಲ್ಲಿಯವರೆಗೆ ಆಸ್ಪತ್ರೆ ನಿರ್ಮಾಣ ಮಾಡದೇ ಇರುವುದನ್ನ ಖಂಡಿಸಿ, ಗ್ರಾಮಸ್ಥರು ಸತ್ತ ಆಕಳು ಹಾಗೂ ದನಕರುಗಳೊಂದಿಗೆ ಪಂಚಾಯತಿಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.
ಪಶುಪತಿಹಾಳ ಗ್ರಾಮದಲ್ಲಿ ಮೊದಲಿದ್ದ ಪಶು ಆಸ್ಪತ್ರೆಯನ್ನ ಗ್ರಾಮ ಪಂಚಾಯತಿಯವರೇ ತೆಗೆದು ಹಾಕಿದ್ದರು. ಹೊಸ ಆಸ್ಪತ್ರೆಯನ್ನ ಕಟ್ಟಿಸುವುದಾಗಿ ಭರವಸೆಯನ್ನ ನೀಡಿದ್ದರು. ಆದರೆ, ಅದು ಕೇವಲ ಭರವಸೆಯಾಗಿಯೇ ಉಳಿದಿದ್ದರಿಂದ ರೈತಾಪಿ ಜನರು ಕಂಗಾಲಾಗಿದ್ದಾರೆ.
ಪಶು ಆಸ್ಪತ್ರೆಯಿಲ್ಲದೇ ಇರುವುದರಿಂದ ಹಲವು ಜಾನುವಾರುಗಳು ಪ್ರತಿದಿನ ಸಾಯುತ್ತಿವೆ. ಅವುಗಳ ಆರೋಗ್ಯ ತಪಾಸಣೆ ಮಾಡಲು ವೈಧ್ಯರು ಇಲ್ಲವಾಗಿದ್ದಾರೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಇಂದು ಗ್ರಾಮ ಪಂಚಾಯತಿಗೆ ದನಕರುಗಳ ಜೊತೆಗೆ ಲಗ್ಗೆಯಿಟಟ ಗ್ರಾಮಸ್ಥರು, ಪಂಚಾಯತಿಗೆ ಬೀಗ ಜಡಿದು ಹೋರಾಟ ಮಾಡುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಕೂಡಾ ಸ್ಪಂದನೆ ನೀಡದೇ ಇರುವುದು ಜನರಲ್ಲಿ ಮತ್ತಷ್ಟು ಆಕ್ರೋಶವನ್ನುಂಟು ಮಾಡುತ್ತಿದೆ.