Posts Slider

Karnataka Voice

Latest Kannada News

ಪ್ರತಿಭಟನೆ ವೇಳೆ ಧಾರವಾಡದಲ್ಲಿ ಎತ್ತು ಹಾಯ್ದು ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭು ಗಂಗೇನಹಳ್ಳಿಗೆ ತೀವ್ರ ಪೆಟ್ಟು… ಸಿವಿಲ್ ಆಸ್ಪತ್ರೆಗೆ ದಾಖಲು…

Spread the love

ಧಾರವಾಡ: ನಗರದ ಶಿವಾಜಿ ವೃತ್ತದ ಬಳಿಯ ಕಸಾಯಿಖಾನೆ ಹತ್ತಿರ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಎತ್ತೊಂದು ನುಗ್ಗಿ ಹಾಯ್ದ ಪರಿಣಾಮ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

​ಧಾರವಾಡ ಹಾಗೂ ಹುಬ್ಬಳ್ಳಿ ಉಪನಗರ ಠಾಣೆಯ ಇನ್ಸ್‌ಪೆಕ್ಟರ್ ಪ್ರಭು ಗಂಗೇನಹಳ್ಳಿ ಗಾಯಗೊಂಡ ಅಧಿಕಾರಿಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನೆಯ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಮನ್ ಗುರು ಅವರಿಗೂ ಅಲ್ಪ ಪ್ರಮಾಣದ ಪೆಟ್ಟು ಬಿದ್ದಿದೆ.

ಕಸಾಯಿಖಾನೆಯ ಬಳಿ ಗೋವು ಸಾಗಾಣಿಕೆ ವಿರೋಧಿ ಪ್ರತಿಭಟನೆ ವೇಳೆ ಏಕಾಏಕಿ ರೊಚ್ಚಿಗೆದ್ದು ಬಂದ ಎತ್ತು ಇನ್ಸ್‌ಪೆಕ್ಟರ್ ಮೇಲೆ ಜಿಗಿದು ಈ ಅವಾಂತರ ಸೃಷ್ಟಿಸಿದೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.


Spread the love

Leave a Reply

Your email address will not be published. Required fields are marked *

You may have missed