Posts Slider

Karnataka Voice

Latest Kannada News

ವಿನೋದ ಅಸೂಟಿ ಅಭಿಮಾನಿಗಳಿಂದ ರಾಯಣ್ಣನಿಗಾಗಿ ಹೋರಾಟ:ಅಧಿಕಾರಿಗಳ ವಿರುದ್ಧ ಆಕ್ರೋಶ

1 min read
Spread the love

ನವಲಗುಂದ: ಬೆಳಗಾವಿ ಜಿಲ್ಲಾ ಪಿರಣವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನ ಅಧಿಕಾರಿಗಳು ತೆರವುಗೊಳಿಸಿದ್ದನ್ನ ಖಂಡಿಸಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಅಭಿಮಾನಿ ಬಳಗ ಪ್ರತಿಭಟನೆ ನಡೆಸಿತು.

ನಗರದಲ್ಲಿರುವ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಸಿದ ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣನ ಪ್ರತಿಮೆಯನ್ನ ತೆರವುಗೊಳಿಸಿದ್ದು, ರಾಷ್ಟ್ರದ್ರೋಹ ಮಾಡಿದಂತೆ. ಇಂತಹವರ ವಿರುದ್ಧ ಕ್ರಮ ಜರುಗಿಸುವ ಜೊತೆಗೆ ಪ್ರತಿಮೆಯನ್ನ ಮತ್ತೆ ಅಲ್ಲೇ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದರು.

ಪ್ರವೀಣ ಶಲವಡಿ, ಚನ್ನಪ್ಪಗೌಡ ಪಾಟೀಲ್,  ಹನಮಂತ ಚಿಕ್ಕಣ್ಣನವರ,   ಮಹಾದೇವ ಚುಂಚನೂರ,  ಶಿವಾನಂದ ಚಲವಾದಿ,  ಸುಲೆಮಾನ ನಾಶೀಪುಡಿ, ಪ್ರಕಾಶ್ ಸಾರಾವರಿ,  ರಾಮು ಮಾಡೊಳ್ಳಿ, ವಿಠ್ಠಲ್ ಮೆಗೆನ್ನವರ್,  ರಮೇಶ ಮಲದಾಸರ್,  ನಿಂಗಪ್ಪ ಕೆಲಗೇರಿ,  ವಿಕ್ರಂ ಕುರಿ, ರಿಯಾಜ್  ನಾಶಿಪುಡಿ, ವಿಠಲ್ ಜಮದಾರ್, ಉಮೇಶ ನವಲಗುಂದ ಸೇರಿದಂತೆ ವಿನೋದ ಅಸೂಟಿ ಅಭಿಮಾನಿಗಳು ಭಾಗವಹಿಸಿದ್ದರು


Spread the love

Leave a Reply

Your email address will not be published. Required fields are marked *