Posts Slider

Karnataka Voice

Latest Kannada News

ಹುಬ್ಬಳ್ಳಿಗೆ ಇದೇ ತಿಂಗಳು ಪ್ರಧಾನಿ ನರೇಂದ್ರ ಮೋದಿ ಆಗಮನ…!!!

1 min read
Spread the love

ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಇದೇ ತಿಂಗಳು ಆಗಮಿಸುತ್ತಿದ್ದಾರೆಂದು ಖಚಿತ ಮೂಲಗಳಿಂದ ಗೊತ್ತಾಗಿದೆ.

ಬಹುತೇಕ ಮಾರ್ಚ್ 19 ರಂದು ದಿನಾಂಕ ಅಧಿಕೃತವಾಗಲಿದೆ ಎಂದು ಹೇಳಲಾಗುತ್ತಿದ್ದು, ಅದೇ ದಿನ ಹಾವೇರಿ, ಬೆಳಗಾವಿ ಕ್ಷೇತ್ರದ ಕಾರ್ಯಕರ್ತರ ಸಮಾವೇಶವೂ ನಡೆಯಲಿದೆ ಎಂಬ ಮಾಹಿತಿಯಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಹುತೇಕ ಪ್ರಲ್ಹಾದ ಜೋಶಿಯವರೇ ಫಿಕ್ಸ್ ಆಗಲಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ.

ಪ್ರಧಾನಿಯವರ ಆಗಮನದಿಂದ ಚುನಾವಣೆಯ ಪ್ರಚಾರದ ರಂಗು ಮತ್ತಷ್ಟು ಏರಲಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕೂಡಾ ಲೋಕಸಭೆ ಚುನಾವಣೆಯ ಅಖಾಡಾದಲ್ಲಿರುವುದು ನಿಶ್ಚಿತವಾಗಿದೆ.


Spread the love

Leave a Reply

Your email address will not be published. Required fields are marked *