Posts Slider

Karnataka Voice

Latest Kannada News

ನಿರ್ಲಕ್ಷ್ಯ, ಪ್ರಾಥಮಿಕ ಶಾಲೆಯ ಗರ್ಭೀಣಿ ಶಿಕ್ಷಕಿ ಸಾವು…!!

1 min read
Spread the love

ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಗರ್ಭಿಣಿ ಶಿಕ್ಷಕಿ ಸಾವು

ಶಿಕ್ಷಕಿಯ ಸಾವಿಗೆ, ವೈದ್ಯರ ವಿರುದ್ಧ ತೀವ್ರ ಆಕ್ರೋಶ

ಚಿತ್ರದುರ್ಗ: ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯೋರ್ವಳು ಸಾವಿಗೀಡಾದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಘಟನೆ.

ಮೃತ ಪವಿತ್ರ (30) ಬಾಂಡ್ರವಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರು. ರಾಂಪುರ ಗ್ರಾಮದ ಲೋಟಸ್ ಆಸ್ಪತ್ರೆ ವೈಧ್ಯರ ವಿರುದ್ದ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದಾರೆಂದು ಆರೋಪಿಸಲಾಗಿದೆ.

ಅನಸ್ತೆಷಿಯಾ ವೈದ್ಯ ಡಾ. ಶಬ್ಬಿರ್ ಹಾಗೂ ಸ್ತ್ರೀ ರೋಗ ತಜ್ಞೆ ಶ್ರೀದೇವಿ ವಿರುದ್ದ ನಿರ್ಲಕ್ಷ್ಯದ ಆರೋಪ ಮಾಡಲಾಗಿದ್ದು, ಬಳ್ಳಾರಿಗೆ ಕಳುಹಿಸಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಮತ್ತೆ ಬನ್ನಿ ಎಂದು ವೈದ್ಯರು ಹೇಳಿದ್ದರಂತೆ.

ಮರಳಿ ಬಂದ ಬಳಿಕ ಆಸ್ಪತ್ರೆಯಲ್ಲಿ ಗಂಟೆಗಟ್ಟಲೇ ಕಾಯಿಸಿದ್ದ ವೈದ್ಯರು, ಮಧ್ಯರಾತ್ರಿ 1:30 ಕ್ಕೆ ಹೈಬಿಪಿಯಿಂದ ಮೃತಪಟ್ಟಿದ್ದಾಗಿ ಸಬೂಬು ನೀಡಿದ್ದಾರೆಂದು ದೂರಲಾಗಿದೆ.

ಮಗು ಹೊಟ್ಟೆಯೊಳಗೆ ಮೃತಪಟ್ಟ ಪರಿಣಾಮ ಶಿಕ್ಷಕಿಯ ಆಪರೇಷನ್ ಮಾಡುತ್ತಿದ್ದ ವೇಳೆ ಸಾವು ಸಂಭವಿಸಿದೆ. ಇದರಿಂದ ರೋಸಿ ಹೋದ ಪತಿ ಶಶಿಧರ ವೈದ್ಯರ ವಿರುದ್ಧ ದೂರಿದ್ದಾರೆ.

ರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *