“ಆಪ್ರೇಷನ್ ಸಿಂಧೂರ” ದೇಶಕ್ಕೆ ಮಾಹಿತಿ ನೀಡಿದ ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮೀಕಾ ಸಿಂಗ್… ಇವರಿಬ್ಬರ ಬಗ್ಗೆ ನಿಮಗೆಷ್ಟು ಗೊತ್ತು…!?

ಧರ್ಮ ಕೇಳಿ ಹತ್ಯೆ ಮಾಡುವ ಮೂಲಕ ಪಹಲ್ಗಾಮ್ನಲ್ಲಿ 26 ಪ್ರವಾಸಿಗರ ಬಲಿ ಪಡೆದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಕೃತ್ಯಕ್ಕೆ ಭಾರತ ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ ಜನರಿಗೆ ಮಾಹಿತಿ ನೀಡುವುದಕ್ಕಾಗಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸೇನೆಯ ಮಹಿಳಾ ಅಧಿಕಾರಿಗಳೇ ಈ ಕಾರ್ಯಾಚರಣೆಯ ಬಗ್ಗೆ ದೇಶಕ್ಕೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಮಹಿಳೆಯ ಸಿಂಧೂರ ಕಸಿದ ಭಯೋತ್ಪಾದಕರಿಗೆ ಮಹಿಳೆಯರೇ ತಿರುಗೇಟು ನೀಡಿದ್ದಾರೆ.
Exclusive video
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸುದ್ದಿಗೋಷ್ಠೀಯಲ್ಲಿ ಮೊದಲಿಗೆ ಇದುವರೆಗೆ ಭಯೋತ್ಪಾದಕ ದಾಳಿಯಿಂದ ದೇಶಕ್ಕಾಗ ಸಾವು ನೋವಿಗೆ ಸಂಬಂಧಿಸಿದಂತೆ ವೀಡಿಯೋ ಬಿಡುಗಡೆ ಮಾಡಲಾಯ್ತು. ಕಳೆದೊಂದು ದಶಕದಲ್ಲಿ ಪಾಕಿಸ್ತಾನದ ಈ ಭಯೋತ್ಪಾದಕ ದಾಳಿಗೆ 350ಕ್ಕೂ ಹೆಚ್ಚು ಭಾರತೀಯ ನಾಗರಿಕರು ಬಲಿಯಾಗಿದ್ದಾರೆ. 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 600ಕ್ಕೂಹೆಚ್ಚು ಭದ್ರತಾ ಪಡೆಯ ಯೋಧರು ಈ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ದೇಶವನ್ನು ರಕ್ಷಿಸುವ ಕಾಯಕದಲ್ಲಿ1,400ಕ್ಕೂ ಹೆಚ್ಚು ಜನ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಆದರೆ ಇನ್ನೂ ಸಹಿಸಲಾಗದು ಎಂದು ಈ ವೀಡಿಯೋದಲ್ಲಿ ಸೇನೆ ಮಾಹಿತಿ ನೀಡಿದೆ.
ನಂತರ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ವೀಡಿಯೋ ಮೂಲಕ ಭಾರತದ ವಾಯುಸೇನೆ ನಡೆಸಿದ ಕಾರ್ಯಾಚರಣೆಯನ್ನು ವಿವರಿಸಿದ್ದಾರೆ. ವೀಡಿಯೋದಲ್ಲಿ ಪಾಕಿಸ್ತಾನದ ಒಳಗೆ 12 ರಿಂದ 18 ಕಿಲೋ ಮೀಟರ್ ದೂರದಲ್ಲಿರುವ ಮೆಹಮೂನ್ ಜೊಯಾ ಕ್ಯಾಂಪ್, ಸೀಯಾಲ್ ಕೋಟ್ ಉಗ್ರರ ಕ್ಯಾಂಪ್ಗಳ ಮೇಲೆ ಸೇನೆ ದಾಳಿ ನಡೆಸಿ ಧ್ವಂಸಗೊಳಿಸಿದ್ದನು ವೀಡಿಯೋದಲ್ಲಿ ತೋರಿಸಲಾಗಿದೆ. ರಾತ್ರಿ 1.44ರ ಸಮಯದಲ್ಲಿ ದಾಳಿ ನಡೆದಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆದಿದೆ. ಈ ಜಾಗಗಳಿಂದಲೇ ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಪ್ಲಾನ್ ಮಾಡಿ ಕೆಲಸ ಮಾಡಲಾಗುತ್ತಿತ್ತು. ಬಹಳ ಜಾಗರೂಕವಾಗಿ ಕೇವಲ ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಈ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ನಾಗರಿಕರನ್ನು ಗುರಿ ಮಾಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
9 ನೆಲೆಗಳನ್ನು ಟಾರ್ಗೆಟ್ ಮಾಡಿ ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ನಾಗರಿಕರಿಗೆ ಹಾಗೂ ಮೂಲ ಸೌಲಭ್ಯಗಳಿಗೆ ಹಾನಿಯಾಗದಂತೆ ಈ ಸ್ಥಳಗಳನ್ನು ಆಯ್ಕೆ ಮಾಡಿ ಈ ದಾಳಿ ಮಾಡಲಾಗಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿದರು. ರಾತ್ರಿ 1.5ರಿಂದ 1.30ರ ನಡುವೆ ಈ ಕಾರ್ಯಾಚರಣೆ ನಡೆದಿದೆ.
ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಯಾರು: ಕರ್ನಲ್ ಸೋಫಿಯಾ ಖುರೇಷಿ ಯಾರು?
🔴 35 ವರ್ಷದ ಸೋಫಿಯಾ ಖುರೇಷಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಅಧಿಕಾರಿ. ಅವರು ಸಿಗ್ನಲ್ ಕಾರ್ಪ್ಸ್ನಲ್ಲಿ ಸೇವೆ ಸಲ್ಲಿಸಿದರು. ಕರ್ನಲ್ ಖುರೇಷಿ ಗುಜರಾತ್ನ ವಡೋದರಾದವರು. ಅವರು ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸೋಫಿಯಾ ಖುರೇಷಿ 1999 ರಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ ಅಡಿಯಲ್ಲಿ ಸೇನೆಗೆ ಸೇರಿದರು. ಆ ಸಮಯದಲ್ಲಿ ಅವಳಿಗೆ ಕೇವಲ 17 ವರ್ಷ. ಸೋಫಿಯಾ ಖುರೇಷಿಯವರ ಅಜ್ಜ ಕೂಡ ಸೈನ್ಯದಲ್ಲಿದ್ದರು. ಸೋಫಿಯಾಳ ಪತಿ ಯಾಂತ್ರಿಕೃತ ಪದಾತಿ ದಳದಲ್ಲಿ ಸೇನಾ ಅಧಿಕಾರಿ.
ಮಾರ್ಚ್ 2016 ರಲ್ಲಿ, ಸೋಫಿಯಾ ಖುರೇಷಿ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾದರು. ‘ಎಕ್ಸರ್ಸೈಸ್ ಫೋರ್ಸ್ 18’ ಎಂಬ ತರಬೇತಿ ವ್ಯಾಯಾಮ ಕಾರ್ಯಕ್ರಮವು ಇದುವರೆಗೆ ನಡೆಸಲಾದ ಅತಿದೊಡ್ಡ ವಿದೇಶಿ ಮಿಲಿಟರಿ ವ್ಯಾಯಾಮವಾಗಿದೆ. ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಈ ವ್ಯಾಯಾಮದಲ್ಲಿ ಭಾಗವಹಿಸಿತು. ಭಾರತ, ಜಪಾನ್, ಚೀನಾ, ರಷ್ಯಾ, ಯುನೈಟೆಡ್ ಸ್ಟೇಟ್ಸ್, ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ, ಭಾಗವಹಿಸಿದ್ದವು. ಇದು ಭಾರತದ ಪುಣೆಯಲ್ಲಿ ನಡೆಯಿತು.
ವಿಂಗ್ ಕಮಾಂಡರ್ ವ್ಯೋಮೀಕಾ ಸಿಂಗ್ ಯಾರೂ…!?
ಭಾರತೀಯ ವಾಯುಪಡೆಯಲ್ಲಿ ಅಲಂಕೃತ ಹೆಲಿಕಾಪ್ಟರ್
ಪೈಲಟ್ ಆಗಿರುವ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್,
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ
ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ
ಗಡಿಯಾಚೆಗಿನ ನಿಖರವಾದ ದಾಳಿಯ ಆಪರೇಷನ್
ಸಿಂಧೂರ್ ನಂತರ ತ್ರಿ-ಸೇನೆಗಳ ಮಾಧ್ಯಮಗೋಷ್ಠಿಯ
ನೇತೃತ್ವ ವಹಿಸುವ ಮೂಲಕ ರಾಷ್ಟ್ರೀಯ ಗಮನ ಸೆಳೆದರು.
ವಿಂಗ್ ಕಮಾಂಡರ್ ಸಿಂಗ್ ಅವರಿಗೆ, ಐಎಎಫ್ಗೆ
ಪ್ರಯಾಣವು ಮೊದಲೇ ಪ್ರಾರಂಭವಾಯಿತು.
"ವ್ಯೋಮಿಕಾ" ಎಂಬ ಹೆಸರು,
ಅಂದರೆ ಆಕಾಶದ ಮಗಳು,
ಅವರ ಬಾಲ್ಯದ ಮಹತ್ವಾಕಾಂಕ್ಷೆಯನ್ನು
ಪ್ರತಿಬಿಂಬಿಸುತ್ತದೆ. ಅವರ ಶಾಲಾ ದಿನಗಳಿಂದಲೂ,
ಅವರು ಹಾರಲು ದೃಢನಿಶ್ಚಯ ಹೊಂದಿದ್ದರು.