Posts Slider

Karnataka Voice

Latest Kannada News

ಧಾರವಾಡದಾಗ “ಹುಚ್ಚರ್ ಹಾಸ್ಪಿಟಲ್ ಯಾಕ್ ಐತೀ ಗೊತ್ತೇನ್ರೀ”…

Spread the love

ಧಾರವಾಡ: ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ವಿದ್ಯಾಕಾಶಿಗೆ ಆಗಮಿಸುತ್ತಿರುವ ಸಮಯದಲ್ಲೇ ಧಾರವಾಡದಲ್ಲಿ ಹುಚ್ಚರ ಆಸ್ಪತ್ರೆ ಯಾಕೀದೆ ಗೊತ್ತೇನ್ರಿ ಎಂದು ಪ್ರಶ್ನೆ ಕೇಳುವಂತಹ ಸ್ಥಿತಿಯನ್ನ ಚಾಣಾಕ್ಷರೆನಿಸಿಕೊಂಡವರೇ ಹುಟ್ಟು ಹಾಕಿದ್ದಾರೆ.

ಧಾರವಾಡ ನಗರದ ಹೊರವಲಯದಲ್ಲಿರುವ ಐಐಟಿ ನೂತನ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಆಗಮಿಸುತ್ತಿದ್ದು, ಅವರನ್ನ ಸ್ವಾಗತಿಸುವ ಬ್ಯಾನರ್ ಗಳನ್ನ ಹಾಕಲಾಗಿದೆ. ಅದರಲ್ಲಿ ‘ರಾಷ್ಟ್ರದ ಮೊದಲ ಮಹಿಳಾ ರಾಷ್ಟ್ರಪತಿ’ ಎಂದು ನಮೂದಿಸಲಾಗಿದೆ. ಈ ವಾಕ್ಯವೇ ಹಲವು ರೀತಿಯಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ. ಇವರು ಮೊದಲ ರಾಷ್ಟ್ರಪತಿಯಾದರೇ ಪ್ರತಿಭಾ ಪಾಟೀಲ ಅವರು ಏನಾಗಿದ್ರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇದರ ಜೊತೆಗೆ ಐಐಟಿ ಬರಲು ಶಾಸಕ ಅರವಿಂದ ಬೆಲ್ಲದ ಮತ್ತು ಸಂಸದ ಪ್ರಲ್ಹಾದ ಜೋಶಿಯವರಷ್ಟೇ ಕಾರಣ ಎಂಬ ರೀತಿಯಲ್ಲಿ ಬರೆಯುವ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನ ಕೈ ಬಿಡಲಾಗಿದೆ. ಇಂತಹ ಹಲವು ಕಾರಣಗಳಿಗಾಗಿಯೇ “ಧಾರವಾಡದಲ್ಲಿ ಹುಚ್ಚರ ಆಸ್ಪತ್ರೆ” ಯಾಕ್ ಐತೀ ಗೊತ್ತೇನ್ರೀ ಎನ್ನುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *