Posts Slider

Karnataka Voice

Latest Kannada News

ನನ್ನ ಗೆಲುವಿಗೆ ಸಿಎಂ ಕಾರಣವೆಂದ ಪ್ರದೀಪ ಶೆಟ್ಟರ- ಪಕ್ಕದಲ್ಲಿದ್ದ ಜೋಡೆತ್ತುಗಳು ಮಾಡಿದ್ದೇನು…!?

1 min read
Spread the love

ಧಾರವಾಡ: ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮನ್ನ ಎರಡನೇಯ ಬಾರಿ ನನ್ನ ಗೆಲುವಿಗೆ ಕಾರಣರಾದ ಸಿಎಂ,‌ ಸಚಿವರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಕಾರಣವೆಂದು ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ಗೆಲುವಿನ ನಗೆ ಬೀರಿದ ಪ್ರದೀಪ ಶೆಟ್ಟರ ಹೇಳಿದರು.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..

ನನಗೆ ಕಡಿಮೆ ಮತ ಯಾಕೆ ಬಂದಿವೆ ಎಂದು ಪಕ್ಷದಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಆದರೆ, ನಾನೂ ಕೂಡಾ ಪ್ರಥಮ ಪ್ರಾಶಸ್ತ್ಯ ಮತಗಳಿಂದ ಗೆದ್ದಿದ್ದೇನೆ. ನಮ್ಮ‌ ಪಕ್ಷದ ಮತ ಎಲ್ಲಿ ವಿಭಜನೆಯಾಗಿವೆ ಎಂದು ಚರ್ಚೆ ಮಾಡುತ್ತೇವೆ ಎಂದ ಪ್ರದೀಪ ಶೆಟ್ಟರ, ನನ್ನ ಕ್ಷೇತ್ರದ ಸದಸ್ಯರ ಎಲ್ಲ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆಂದರು.

ಇದೇ ಸಮಯದಲ್ಲಿ ಬಿಜೆಪಿಯ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಮುಖಂಡ ಮಹೇಂದ್ರ ಕೌತಾಳ, ಮಲ್ಲಿಕಾರ್ಜುನ ಸಾವುಕಾರ ಸೇರಿದಂತೆ ಹಲವರು ಗೆಲುವಿನ ಸಂಭ್ರಮಾಚರಿಸಿದರು.


Spread the love

Leave a Reply

Your email address will not be published. Required fields are marked *