Posts Slider

Karnataka Voice

Latest Kannada News

ಮಾನವತೆ ಮೆರೆದ “2002” ಸಿವಿಲ್ ಪೊಲೀಸ್ ಬ್ಯಾಚ್: ಆತ್ಮಹತ್ಯೆ ಮಾಡಿಕೊಂಡ ಜೊತೆಗಾರನ ಕುಟುಂಬಕ್ಕೆ ಆಸರೆ…!!!

1 min read
Spread the love

ಹುಬ್ಬಳ್ಳಿ: ತಮ್ಮ ಜೊತೆಗೆ ನೌಕರಿಗೆ ಸೇರಿ ದಶಕಗಳ ಕಾಲ ಜೊತೆಗೆ ಕರ್ತವ್ಯ ನಿರ್ವಹಿಸಿದ್ದ ಹವಾಲ್ದಾರ್‌ರೋರ್ವರು ಆತ್ಮಹತ್ಯೆ ಮಾಡಿಕೊಂಡ ನಂತರವೂ, ಮೃತನ ಕುಟುಂಬಕ್ಕೆ ಜೊತೆಗೆ ನೌಕರಿ ಸೇರಿದ ಎಲ್ಲ ಪೊಲೀಸರು ನೆರವು ನೀಡಿ ಮಾನವೀಯತೆ ಮೆರೆಯುವುದಲ್ಲದೇ, ಕುಟುಂಬಕ್ಕೆ ಆಸರೆಯ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ನವನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಾಗರಾಜ ಹಂಚಿಮನಿ ಅವರ ನಿವಾಸಕ್ಕೆ ತೆರಳಿದ 2002 ರ ಸಿವಿಲ್ ಪೊಲೀಸ್ ಬ್ಯಾಚ್ ಸಿಬ್ಬಂದಿಗಳು, ನಾಗರಾಜ ಅವರ ಪತ್ನಿ ಮತ್ತು ಮಕ್ಕಳಿಗೆ ಹಣಕಾಸಿನ ನೆರವು ನೀಡಿದ್ದಾರೆ.

2002 ಬ್ಯಾಚಿನ ಪ್ರತಿಯೊಬ್ಬರು ತಮ್ಮ ಕರ್ತವ್ಯದಲ್ಲಿನ ಸಂಬಳದ ಹಣವನ್ನ ಕ್ರೋಡಿಕರಿಸಿ, ಒಟ್ಟು 115000 ಹಣವನ್ನ ಸೇರಿಸಿ ಕುಟುಂಬದವರಿಗೆ ಸಹಾಯ ಮಾಡಿದ್ದಾರೆ.

ತಮ್ಮ ಬ್ಯಾಚಿನ ಪ್ರತಿಯೊಬ್ಬರ ಕುಟುಂಬದ ಬಗ್ಗೆ ಕಾಳಜಿ ಹೊಂದಿರುವ ಇವರು, ಬೇರೆಯವರಿಗೆ ಮಾದರಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *