Posts Slider

Karnataka Voice

Latest Kannada News

“ನವಲೂರು ಪೇರಲ” ತಿಂದವನಿಂದ 3ಲಕ್ಷದ ಸೆಟ್ಲಮೆಂಟ್…. ಬಿಜೆಪಿ ಮುಖಂಡನ ಪೌರೋಹಿತ್ಯ…!

1 min read
Spread the love

ಹುಬ್ಬಳ್ಳಿ: ನವಲೂರಿನ ಪೇರಲ ಹಣ್ಣು ತಿಂದು ಬಾಯಿ ಒರೆಸಿಕೊಳ್ಳಲು ಮುಂದಾಗಿದ್ದ ‘ಶ್ರೀಮಂತ’ ಪೊಲೀಸನಿಗೆ ಕೊನೆಗೂ ರಿಲೀಫ್ ಕೊಡಿಸುವಲ್ಲಿ ಈಗಷ್ಟೇ ಹೊಸ ಹುದ್ದೆ ಅಲಂಕರಿಸಿರುವ ಪಾಲಿಕೆಯ ಮಾಜಿ ಸದಸ್ಯ ಯಶಸ್ವಿಯಾಗಿದ್ದಾರೆ.

ಎರಡು ಮಕ್ಕಳ ತಂದೆಯಾಗಿರುವ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ತಿರುಗಾಡುತ್ತಿದ್ದ ಪೇದೆಯೋರ್ವ ಮದುವೆಯಾಗುವುದಾಗಿ ಮಹಿಳೆಯೋರ್ವಳನ್ನ ವಂಚನೆ ಮಾಡಿದ್ದ. ಅದೇ ಕಾರಣಕ್ಕೆ ರೋಸಿ ಹೋಗಿದ್ದ ಆಕೆ ಠಾಣೆಯಲ್ಲಿಯೇ ಬಂದು ಕುಳಿತು, ತಾಳಿ ಕಟ್ಟು ಎಂದು ಕೂತಿದ್ದಳು.

ಇದಾದ ನಂತರ ಡ್ರಾಮಾ ಬದಲಾಗಿತ್ತು. ಹೇಗಾದರೂ ಮಾಡಿ, ನವಲೂರು ಪೇರಲವನ್ನ ದೂರ ಮಾಡಬೇಕೆಂದು ಹೊರಟ ‘ಶ್ರೀಮಂತ’ ಅದಕ್ಕೆ ಆಯ್ದುಕೊಂಡಿದ್ದು, ಭಾರತೀಯ ಜನತಾ ಪಕ್ಷದ ಮುಖಂಡನನ್ನ.

ಮೂರು ಲಕ್ಷ ರೂಪಾಯಿಯನ್ನ ಕೊಟ್ಟು ಸಮಾಧಾನ ಮಾಡುವ ಯತ್ನದಲ್ಲಿ ಕೊನೆಗೂ ಬಿಜೆಪಿ ಮುಖಂಡ ಯಶಸ್ವಿಯಾಗಿದ್ದಾರೆ. ಅಸಲಿಗೆ, ‘ಶ್ರೀಮಂತ’ ಎಂಟು ಲಕ್ಷ ರೂಪಾಯಿಯನ್ನ ಬಿಜೆಪಿ ಮುಖಂಡನಿಗೆ ಕೊಟ್ಟಿದ್ದನಂತೆ. ಅದರಲ್ಲಿ 5ಲಕ್ಷ ಮೈನಸ್ ಆಗಿ, ಉಳಿದ ಮೂರು ನವಲೂರು ಪೇರಲಣ್ಣಿಗೆ ಸಿಕ್ಕಿದೆ ಎಂದು ಗೊತ್ತಾಗಿದೆ. ಯಥಾ ರಾಜಾ.. ತಥಾ ಪ್ರಜಾ ಅಂದ್ರೇ ಇದೇನಾ…


Spread the love

Leave a Reply

Your email address will not be published. Required fields are marked *