Posts Slider

Karnataka Voice

Latest Kannada News

ದೇಶದಲ್ಲಿ ಯಾವುದೇ ಇನ್ಸಪೆಕ್ಟರ್ ಮಾಡದ ಸಾಧನೆಯನ್ನ “ಮಾಡಿ ಗುರಿ ತಲುಪಿದ” ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ….

Spread the love

ಶ್ರೀಲಂಕಾ: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮುರುಗೇಶ ಚನ್ನಣ್ಣವರ ಮತ್ತು ಎಂಬಿಬಿಎಸ್ ವಿದ್ಯಾರ್ಥಿ ಅಮನ ಶಾನಬಾಗ ಅವರುಗಳು ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯವರೆಗೆ ರಾಮಸೇತು ಮೂಲಕ 28 ಕಿಲೋಮೀಟರ್ ರಿಲೇ ಸ್ವಿಮ್ಮಿಂಗ್‌ದಲ್ಲಿ ಸಾಧಿಸಿ ಕರುನಾಡಿನ ಕೀರ್ತಿಯನ್ನ ಹೆಚ್ಚಿಸಿದ್ದಾರೆ.

Exclusive Videos..

ಈ ವಿಶೇಷ ತಂಡದಲ್ಲಿ ಉತ್ತರಪ್ರದೇಶ ಮತ್ತು ಹರಿಯಾಣದ ಇಬ್ಬರು IAS ಅಧಿಕಾರಿಗಳು ಹಾಗೂ ಪಶ್ಚಿಮ ಬಂಗಾಳ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳನ್ನು ಒಳಗೊಂಡಿತ್ತು. ತಂಡವು ಕಷ್ಟಕರವಾದ 28 ಕಿಲೋಮೀಟರನ ಈಜುವನ್ನ  ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಮತ್ತು ಅತಿಯಾದ ಅಲೆಗಳಲ್ಲಿ ಕೇವಲ 8 ಗಂಟೆ 30 ನಿಮಷದಲ್ಲಿ ಮುಗಿಸಿ ಈ ಅದ್ಭುತ ಸಾಧನೆಯನ್ನು ಮಾಡಿದೆ.

ಸಾಧನೆಗೆ ಸ್ಫೂರ್ತಿಯಾಗಿ ಧರ್ಮಪತ್ನಿ ಶ್ವೇತಾ ಚನ್ನಣ್ಣವರ ಅವರು ಬೋಟಿನಲ್ಲಿ ಶ್ರೀಲಂಕಾಗೆ ಹೋಗಿದ್ದರು. ಈ ಮೂಲಕ ಐರನಮ್ಯಾನ, ಕಾಶ್ಮೀರ ಟು ಕನ್ಯಾಕುಮಾರಿ ಸೈಕ್ಲಿಂಗ್ ಮುಂತಾದ ಸಾದನೆಗಳ ಮೂಲಕ ಪೊಲೀಸ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹೆಸರುವಾಸಿಯಾಗಿರುವ ಖಡಕ್ ಅಧಿಕಾರಿ ಮುರುಗೇಶ ಚನ್ನಣ್ಣವರ ಅವರು ಮತ್ತೊಂದು ಮೈಲುಗಲ್ಲು ಸೃಷ್ಟಿಸಿದ್ದಾರೆ.

ದಕ್ಷ ಅಧಿಕಾರಿ ಮುರುಗೇಶ ಚೆನ್ನಣ್ಣನವರ ಮತ್ತು ಅಮನ ಶಾನಬಾಗ ಮುಂಬರವ ಜೂನ ತಿಂಗಳಲ್ಲಿ ವಿಶ್ವದ ಅತಿ ಕಷ್ಟಕರವಾದ ಇಂಗ್ಲಿಷ ಕಾಲುವೆ(ಇಂಗ್ಲೆಂಡ ಮತ್ತು ಫ್ರಾನ್ಸ ಮದ್ಯದ 36 ಕಿಲೋಮೀಟರ ಕಾಲುವೆ) ಯನ್ನು ಈಜಲು ಹೊರಟಿರುವದು ನಮ್ಮ ನಾಡು ಮತ್ತು ಕರ್ನಾಟಕ ಪೊಲೀಸ್ ಇಲಾಖೆ ಹೆಮ್ಮೆ ಪಡುವ ವಿಷಯವಾಗಿದೆ.


Spread the love

Leave a Reply

Your email address will not be published. Required fields are marked *

You may have missed