ಜನರ ರಕ್ಷಣೆಯ “ತಿಳುವಳಿಕೆ”ಗಾಗಿ ಬೀದಿ ಬೀದಿ ಅಲೆದ ಇನ್ಸಪೆಕ್ಟರ್ ಶ್ರೀಕಾಂತ ತೋಟಗಿ…!

ಹುಬ್ಬಳ್ಳಿ: ಸರಕಾರದ ಕೆಲಸ ದೇವರ ಕೆಲಸವೆಂದು ಬಂದು ಕರ್ತವ್ಯ ನಿರ್ವಹಣೆ ಮಾಡುವ ಮನಸ್ಸುಗಳ ಮನಸ್ಥಿತಿಯೇ ಬೇರೆಯಾಗಿರತ್ತೆ ಎನ್ನುವುದಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಶ್ರೀಕಾಂತ ತೋಟಗಿ ಉದಾಹರಣೆಯಾಗಿ ನಿಲ್ಲುತ್ತಾರೆ.
ಇನ್ಸಪೆಕ್ಟರ್ ಶ್ರೀಕಾಂತ ಅವರು, ಇಂದು ಪ್ರಮುಖ ಬೀದಿಗಳಲ್ಲಿ ಜನರಿಗೆ ತಿಳುವಳಿಕೆ ನೀಡಿದರು. ಝೀಬ್ರಾ ಕ್ರಾಸಿಂಗ್ ಮಾಡಿರುವ ಬಗ್ಗೆ, ಪಾದಚಾರಿ ಮತ್ತು ವಾಹನ ಸವಾರರಿಗೆ ತಿಳುವಳಿಕೆ ನೀಡಿದರು.
ಹೇಗಿತ್ತು.. ಇಲ್ಲಿದೆ ನೋಡಿ ವೀಡಿಯೋ..
ಉತ್ತರ ಸಂಚಾರಿ ಠಾಣೆಯ ಸಿಬ್ಬಂದಿಗಳೊಂದಿಗೆ ಜನರಿಗೆ ತಿಳುವಳಿಕೆ ನೀಡಿದರು. ಸಂಚಾರಿ ನಿಯಮಗಳನ್ನ ಪಾಲನೆ ಮಾಡುವ ಮೂಲಕ, ಮತ್ತಷ್ಟು ನೆಮ್ಮದಿಯನ್ನ ಕಾಣಿ ಎಂದು ಜನರಿಗೆ ಮನವಿಯನ್ನ ಇನ್ಸಪೆಕ್ಟರ್ ಮಾಡಿಕೊಂಡರು.