ಪೊಲೀಸ್ ಇನ್ಸಪೆಕ್ಟರ್ “ಪಾಟೀಲ” ವಿರುದ್ಧ ಹೋರಾಟಕ್ಕೆ ಸಿದ್ಧತೆ…

ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆಯಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲ- ರೈತ ಮುಖಂಡರ ಆರೋಪ
ಸಿಪಿಐ ಹಠಾವೋ, ಬಾಗಲಕೋಟ ಜಿಲ್ಲಾ ಬಚಾವೊ
ಬಾಗಲಕೋಟೆಗೆ ವರ್ಗಾವಣೆಯಾಗಿ ಬಂದ ಸಿಪಿಐ ವಿರುದ್ಧ ರೈತ ಸಂಘಟನೆ ಹೋರಾಟಕ್ಕೆ ಸಜ್ಜು
ಬಾಗಲಕೋಟೆ: ಗ್ರಾಮೀಣ ವೃತ್ತದ ಸಿಪಿಐ ಹೆಚ್.ಆರ್. ಪಾಟೀಲ್ ವಿರುದ್ಧ ರೈತರು ಪ್ರತಿಭಟನೆಗೆ ಸಜ್ಜಾಗಿದ್ದು, ಹೆಚ್.ಆರ್.ಪಾಟೀಲ್ ಭ್ರಷ್ಟ ಅಧಿಕಾರಿ ಎಂದು ರೈತ ಮುಖಂಡ, ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಆರೋಪಿಸಿದ್ದಾರೆ.
ಈ ಹಿಂದೆ ಮುಧೋಳದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ್ದ ವೇಳೆ ರೈತರು, ಕಾರ್ಮಿಕರು ಮೇಲೆ ಸುಳ್ಳು ಕೇಸ್ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ.
ರೈತ ಮುಖಂಡ ಹೇಳಿಕೆ..
ಹಿಂದಿನ ಸರ್ಕಾರದಲ್ಲಿ ರಾಯಚೂರು ಜಿಲ್ಲೆಗೆ ಎತ್ತಂಗಡಿಯಾಗಿದ್ದ ಸಿಪಿಐ ಹೆಚ್.ಆರ್.ಪಾಟೀಲ್ರನ್ನ ಈಗ ಮತ್ತೆ ಬಾಗಲಕೋಟೆ ಗ್ರಾಮೀಣ ವೃತ್ತಕ್ಕೆ ಸಿಪಿಐ ಆಗಿ ತರಲಾಗಿದೆ. ಬಾಗಲಕೋಟೆ ಶಾಸಕ ಹೆಚ್.ವೈ.ಮೇಟಿ ಹಾಗೂ ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಕುಮ್ಮಕ್ಕಿನಿಂದ ಮತ್ತೆ ಬಾಗಲಕೋಟೆಗೆ ಬಂದಿದ್ದಾರೆಂದು ಆರೋಪಿಸಿದರು.
ಇವರನ್ನ ಈಗ ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಆಗಸ್ಟ 3 ರಂದು ನಗರದ ರಂದು ಜಿಲ್ಲಾಡಳಿತ ಭವನದ ಮುಂದೆ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಸುಳ್ಳು ಕೇಸನ್ನ ದಾಖಲಿಸುವ ಮತ್ತು ವಿವಿಧ ಮಾಫಿಯಾಗಳಿಗೆ ಕಿಂಗ್ಪಿನ್, ರೈತ ಕಾರ್ಮಿಕ, ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ಸಿಪಿಐ ಅವರು ತೊಲಗಿಸಿ, ಜಿಲ್ಲೆಯನ್ನ ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ಹರಿದಾಡುತ್ತಿದೆ.