Posts Slider

Karnataka Voice

Latest Kannada News

ಸಿಟಿಯಲ್ಲಿದ್ರೇ 1 ಸಾವಿರ, ಹೊರಗೋದ್ರೆ 1200: ಹುಬ್ಬಳ್ಳಿ ಇನ್ಸಪೆಕ್ಟರ್ ನ ವಸೂಲಿ ದಂಧೆ…!?

Spread the love

ಹುಬ್ಬಳ್ಳಿ: ಕೆಲವು ಆರಕ್ಷಕರ ವೇಷದಲ್ಲಿ ವಾಣಿಜ್ಯನಗರಿಗೆ ಲೂಟಿ ಮಾಡಲು ಬರುತ್ತಿದ್ದಾರೆಂಬ ಆತಂಕ ಸಾಮಾನ್ಯ ಜನರಲ್ಲಿ ಮೂಡುತ್ತಿದ್ದು, ಕೊರೋನಾದಂತಹ ಸಂಧಿಗ್ಧ ಕಾಲದ ನಂತರವೂ ಹಣದ ಹಪಾಹಪಿ ನಿಲ್ಲದೇ ಇರುವುದು ಸೋಜಿಗ ಮೂಡಿಸುತ್ತಿದೆ.

ಸಾಮಾನ್ಯವಾಗಿ ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಕಾಣ ಸಿಗುವ ಪೊಲೀಸ್, ಹವಾಲ್ದಾರ ಮತ್ತು ಎಎಸ್ಐ ತಾವೇ ಮರ್ಜಿಯಿಂದ ಬಂದಿರೋಲ್ಲ, ಅದನ್ನ ಫಿಕ್ಸ್ ಮಾಡಲಾಗಿರತ್ತಂತೆ. ಅದೇ ಚಾಳಿಯನ್ನ ಹುಬ್ಬಳ್ಳಿಯ ಇನ್ಸಪೆಕ್ಟರ್ ವೊಬ್ಬರು ಮುಂದುವರೆಸಿದ್ದಾರೆಂದು ಖಚಿತವಾಗಿ ತಿಳಿದು ಬಂದಿದೆ.

ಹುಬ್ಬಳ್ಳಿ ನಗರದಿಂದ ಹೈವೆಗಳಿಗೆ ಇಂಟರ್ ಸೆಪ್ಟರ್ ಹೋಗಬಾರದೆಂದು ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದರೂ, 1200 ರೂಪಾಯಿ ಕೊಟ್ಟವರನ್ನ ವಾಹನದ ಸಮೇತ ಕಳಿಸುತ್ತಿರುವುದು ಕಂಡು ಬರುತ್ತಿದೆ. ಅಲ್ಲಿ, ವಾಹನ ಸವಾರರನ್ನ ನಿಯಮ ಉಲ್ಲಂಘನೆಯ ಕಿರಿಕಿರಿ ಕೊಟ್ಟು, ಆತ ಪ್ರತಿ ದಿನ ಸಾಹೇಬ್ರಿಗೆ ಕೊಟ್ಟು, ತಾನೂ ಉಳಿಸಿಕೊಂಡು ಹೋಗಬೇಕು.

ಇಂತಹವರನ್ನ ನೋಡಿಯೇ ಬಹುಶಃ, ‘ಚೆನ್ನಪ್ಪ ಚೆನ್ನಗೌಡ, ಕುಂಬಾರ ಮಾಡಿದ ಕೊಡನವ್ವಾ.. ಚೆಂದಕ್ ತಂದೇನಿ, ತಂಗೀ ನೀರಿಗೀ ಬಂದೇನಿ’ ಎಂದು ಬರೆದರೇನೋ..

ಪ್ರತಿ ದಿನವೂ ನಾಲ್ಕೈದು ಕಡೆ ಪಾಯಿಂಟ್ ಮಾಡಿ, ಹಣವನ್ನ ಕ್ರೋಡಿಕರಿಸುವುದಕ್ಕೆ ಮುಂದಾಗಿರುವ ಇನ್ಸಪೆಕ್ಟರ್, ಸಂಜೆಯಾದರೇ, ತಮ್ಮ ಮೇಲಿನ ಅಧಿಕಾರಿಗೆ ಬಾಟಲಿಯಲ್ಲಿನ ರಸವನ್ನ ಕುಡಿಸಿ, ಬೇರೆಯವರ ಬಗ್ಗೆ ‘ಚಾಡಿ ಹೇಳಿ’ ಬರುವುದನ್ನ ರೂಢಿಸಿಕೊಂಡಿದ್ದಾನಂತೆ. ಇಂಥವರಿಂದ ಹುಬ್ಬಳ್ಳಿ ಉದ್ಧಾರವಾದೀತೆ..


Spread the love

Leave a Reply

Your email address will not be published. Required fields are marked *