ರಸ್ತೆ ಅಪಘಾತ ಪೊಲೀಸ್ ಕಾನ್ಸಟೇಬಲ್ ದುರ್ಮರಣ…

ಬೆಳಗಾವಿ: ಕರ್ತವ್ಯ ಮುಗಿಸಿ ತೆರಳುತ್ತಿದ್ದ ಪೊಲೀಸ್ ಕಾನ್ಸ್ಟೆಬಲ್ ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಗೋಕಾಕ ತಾಲೂಕಿನ ಬೆನಚಿಕಮರಡಿ ಗ್ರಾಮದ ಬಳಿ ಸಂಭವಿಸಿದೆ.

ಘಟನೆಯಲ್ಲಿ 24 ವರ್ಷದ ಪೊಲೀಸ್ ಆನಂದ ಸುಲದಾಳ ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಕರ್ತವ್ಯ ಮುಗಿಸಿ ಹುದಲಿಯ ಮನೆಗೆ ತೆರಳುತ್ತಿದ್ದಾಗ ಅಪಘಾತವಾಗಿದೆ.
ಮೃತ ಪೊಲೀಸ್ ಸಾಕಷ್ಟು ಇಷ್ಟಪಟ್ಟು ಪೊಲೀಸ್ ನೌಕರಿಗೆ ಸೇರಿದ್ದರು. ಹಾಗಾಗಿಯೇ, ಯಾವುದೇ ಡ್ಯೂಟಿ ಹಾಕಿದರೂ, ತಪ್ಪದೇ ನಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಆನಂದ ಬುಧವಾರ ಹೆಣ್ಣು ನೋಡುವುದಕ್ಕೆ ಹೋಗುವವರಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿದ್ದು, ಆನಂದ ಇನ್ನಿಲ್ಲವಾಗಿದ್ದಾರೆ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.