Posts Slider

Karnataka Voice

Latest Kannada News

ಹುಬ್ಬಳ್ಳಿ ಟೋಯಿಂಗ್ ಪ್ರಕರಣ ‘ಹಣ’ಸಿ ಪಾತ್ರವೇನು… ಎಸಿಪಿ ಮುಂದೆ ಹೇಳಿದ ಸತ್ಯವೇನು…?

Spread the love

ಧಾರವಾಡ: ವಾಣಿಜ್ಯನಗರಿಯ ಸಂಚಾರಿ ಠಾಣೆಯೊಂದರಲ್ಲಿ ನಡೆದಿರುವ ಟೋಯಿಂಗ್ ಪ್ರಕರಣದ ತನಿಖೆಯನ್ನ ನಡೆಸುತ್ತಿರುವ ಎಸಿಪಿ ಅಧಿಕಾರಿಯ ಮುಂದೆ, ಅಂದಿನ ಕೆಲವು ಪಾಲುದಾರರು ಹಲವು ಸತ್ಯಗಳನ್ನ ಬಿಚ್ಚಿಟ್ಟಿದ್ದಾರೆಂದು ಗೊತ್ತಾಗಿದೆ.

ಹುಬ್ಬಳ್ಳಿಯ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಟೋಯಿಂಗ್ ಮಾಡಿಕೊಂಡು ಹೋಗುವ ವಾಹನಗಳು ಎಷ್ಟು ಮತ್ತು ಎಷ್ಟು ವಾಹನಗಳಿಗೆ ದಂಡ ಹಾಕಲಾಗುತ್ತಿದೆ ಎಂಬ ಮಾಹಿತಿಯನ್ನ ಆಧರಿಸಿ, ಹಿರಿಯ ಅಧಿಕಾರಿಗಳು ತನಿಖೆಗೆ ಎಸಿಪಿ ಮಟ್ಟದ ಅಧಿಕಾರಿಯನ್ನ ನೇಮಕ ಮಾಡಲಾಗಿದೆ.

ಈಗಾಗಲೇ ಎಸಿಪಿ ಅಧಿಕಾರಿಯ ಮುಂದೆ ಇನ್ಸಪೆಕ್ಟರ್ ಸಮೇತ, ಟೋಯಿಂಗ್ ಮಾಡಿದ ವಾಹನದಲ್ಲಿದ್ದ ಫಲಾನುಭವಿಗಳು (?) ಉತ್ತರವನ್ನ ಕೊಟ್ಟು ಬಂದಿದ್ದು, ತಮ್ಮ ಅಧಿಕಾರಿಯ ಬಣ್ಣವನ್ನ ಸಂಪೂರ್ಣವಾಗಿ ವಿವರಿಸಿದ್ದಾರೆಂದು ಗೊತ್ತಾಗಿದೆ.

ಇದೇಲ್ಲದರ ನಡುವೆ ತನಿಖೆ ಮಾಡುತ್ತಿರುವ ದಕ್ಷ ಅಧಿಕಾರಿಯ ಹೆಸರು ಕೆಡಿಸಲು ‘ಅಪಾಯದಲ್ಲಿರುವ’ ಅಧಿಕಾರಿ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ತನಿಖೆ ಮಾಡುತ್ತಿರುವ ಅಧಿಕಾರಿ ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ವೃತ್ತಕ್ಕೆ ವರ್ಗಾವಣೆಯಾಗಲು ಬಯಸಿದ್ದು, ಅದಕ್ಕಾಗಿ ಹಣ ಹೊಂದಿಸುವಂತೆ ಹೇಳಿದ್ದಾರೆಂಬ ಗುಸುಗುಸು ಇಲಾಖೆಯಲ್ಲಿ ಕೇಳಿ ಬರಲಾರಂಭಿಸಿದೆ.

ಇದಕ್ಕೇಲ್ಲ ‘ಹಣ’ಸಿ ನೀಡಿದ ಮಾಹಿತಿಯೇ ಕಾರಣವೆಂದು ಗೊತ್ತಾಗಿದ್ದು, ಇಲಾಖೆಯ ಮಾನವನ್ನ ಗೌರವಂತರೇ ಕಾಪಾಡಬೇಕಿದೆ.. ಅಲ್ಲವೇ..!?


Spread the love

Leave a Reply

Your email address will not be published. Required fields are marked *