ಭೂಗತ ಪಾತಕಿಗೆ “ಸರಸದವಕಾಶ” ನೀಡಿದ ಪೊಲೀಸರು ಅಮಾನತ್ತು…

ಬಳ್ಳಾರಿ: ಭೂಗತ ಪಾತಕಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಮರಳಿ ಹೋಗುವಾಗ ಧಾರವಾಡ ಬಳಿಯ ವನಶ್ರೀನಗರದ ವಸತಿ ಗೃಹದ ಬಳಿ ಕಣ್ಣಾಮುಚ್ಚಾಲೆ ಆಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಪೊಲೀಸರನ್ನ ಅಮಾನತ್ತು ಮಾಡಿ ಜಿಲ್ಲಾ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬಳ್ಳಾರಿಯ ಮುಖ್ಯಪೇದೆ ಯೋಗೇಶಾಚಾರಿ, ಪೊಲೀಸರುಗಳಾದ ಎಸ್.ಶಶಿಕುಮಾರ, ರವಿಕುಮಾರ ಹಾಗೂ ಸಂಗಮೇಶ ಕಾಳಗಿ ಎಂಬುವವರನ್ನ ಅಮಾನತ್ತು ಮಾಡಲಾಗಿದೆ.

ಈ ಪತ್ರಿಕಾ ಪ್ರಕಟನೆಯಲ್ಲಿ ಪೊಲೀಸರ ಮಾನ ಕಾಪಾಡುವ ಪ್ರಯತ್ನ ನಡೆದಿದೆ ಎಂಬ ಸಂಶಯ ಬರುತ್ತಿದೆ ಎನ್ನುವುದನ್ನ ಹುಬ್ಬಳ್ಳಿ ಪೊಲೀಸರು ಬಹಿರಂಗ ಮಾಡಬೇಕಿದೆ.