Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್ ಮೇಲ್: ಇಬ್ಬರು ಪತ್ರಕರ್ತರು, ಸಿಸಿಬಿ ಪೊಲೀಸ್ ಬಂಧನ…!

1 min read
Spread the love

ಹುಬ್ಬಳ್ಳಿ: ನಗರದ ಹೊರವಲಯದಲ್ಲಿನ ಬಡೇಸೋಪಿನ ಪ್ಯಾಕ್ಟರಿಗೆ ಹೋಗಿ ಬ್ಲ್ಯಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯ ಪೊಲೀಸರು, ಇಬ್ಬರು ಪತ್ರಕರ್ತರನ್ನ ಬಂಧನ ಮಾಡಿದ್ದಾರೆ.

ಬಡೇಸೋಪಿನ ಪ್ಯಾಕ್ಟರಿಗೆ ಹೋಗಿ ಬ್ಲ್ಯಾಕಮೇಲ್ ಮಾಡಿದ್ದ ಪತ್ರಕರ್ತರ ಅಕೌಂಟಿಗೆ ಹಣ ಹಾಕಿಸಿದ ಆರೋಪದ ಮೇಲೆ ಪೊಲೀಸ್ ಪೇದೆಯನ್ನೂ ಬಂಧನ ಮಾಡಲಾಗಿದೆ. ಬಂಧಿತ ಮೂವರ ಮೇಲೂ 384 ಪ್ರಕರಣ ದಾಖಲು ಮಾಡಿ, ಕಾರಾಗೃಹಕ್ಕೆ ಕಳಿಸಲಾಗಿದೆ.

ಒಂದೇ ಗುರಿ ಪತ್ರಿಕೆಯ ನಿತ್ಯಾನಂದ ಶೆಟ್ಟಿ, ಸ್ಪೀಡ್ ನ್ಯೂಸ್ ಹೆಸರಿನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಂದೀಪ ಬಳ್ಳಾರಿ ಹಾಗೂ ಸಿಸಿಬಿ ಪೊಲೀಸ್ ಪೇದೆ ಪೇದೆ ವಿಜಯ ಮರೆಪ್ಪನವರನ್ನ ಬಂಧನ ಮಾಡಲಾಗಿದೆ.

ಬಡೇಸೋಪು ಪ್ಯಾಕ್ಟರಿಗೆ ಹೋಗಿ ಬ್ಲ್ಯಾಕ್ ಮೇಲ್ ಮಾಡಿದ್ದ ಸಮಯದಲ್ಲಿ, ಪತ್ರಕರ್ತರಿಗೆ ಪ್ಯಾಕ್ಟರಿ ಮಾಲೀಕರಿಗೆ ಐದು ಸಾವಿರ ಕೊಡಿಸಿ, ಗೊಂದಲ ಬಗೆಹರಿಸಲು ಮುಂದಾಗಿದ್ದ ಪೇದೆಯನ್ನೂ ಆರೋಪಿ ಮಾಡಲಾಗಿದ್ದು, ಮೂವರನ್ನ ಬಂಧನ ಮಾಡಲಾಗಿದೆ.

ಇನ್ಸಪೆಕ್ಟರ್ ಶ್ಯಾಮರಾವ್ ಸಜ್ಜನ ಅವರು ಮಾಹಿತಿಯನ್ನ ಪೊಲೀಸ್ ಕಮೀಷನರ್ ಲಾಬುರಾಮ್ ಅವರಿಗೆ ನೀಡಿ, ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *