ಕಿರಾಣಿ-ಮಾಂಸದ ಅಂಗಡಿ ಮಾತ್ರ ಹನ್ನೆರಡರವರೆಗೆ… ಪೊಲೀಸರು ಏನು ಹೇಳ್ತಿದ್ದಾರೆ ಕೇಳಿ…!

ಧಾರವಾಡ: ಜಿಲ್ಲೆಯಲ್ಲಿ ನಾಳೆಯಿಂದ ಮೂರು ದಿನದವರೆಗೆ ಲಾಕ್ ಡೌನ್ ಸಡಲಿಕೆ ಮಾಡಲಾಗಿದ್ದು, ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶವನ್ನ ನೀಡಲಾಗಿದೆ. ಅದು ಯಾವ ಥರ ಇರುತ್ತದೆ ಎಂಬುದನ್ನ ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ವಿವರಿಸಿದ್ದಾರೆ ನೋಡಿ.
ತರಕಾರಿ ಮತ್ತು ಹಾಲು ವ್ಯಾಪಾರ ಬೆಳಿಗ್ಗೆ ಆರರಿಂದ ಎಂಟು ಗಂಟೆವರೆಗೆ ಮಾತ್ರ ಇರತ್ತೆ. ಇನ್ನುಳಿದಂತೆ ಕಿರಾಣಿ ಅಂಗಡಿ ಮತ್ತು ಮಾಂಸದ ಅಂಗಡಿಗಳು ಮೂರು ದಿನವರೆಗೆ ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರುತ್ತವಂತೆ. ಇನ್ನುಳಿದ ಯಾವುದೇ ಅಂಗಡಿಗಳನ್ನ ತೆಗೆಯಬಾರದೆಂದು ಪೊಲೀಸರು ಸೂಚನೆಯನ್ನ ನೀಡಿದ್ದಾರೆ.