Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ- ಹಿರಿಯ ಅಧಿಕಾರಿಗಳು ಮಾಡಿದ್ದು…

1 min read
Spread the love

ಹುಬ್ಬಳ್ಳಿ: ಕೊರೋನಾ ಮಹಾಮಾರಿಯ ಎರಡನೇಯ ಅಲೆ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿಗಳು ಪ್ರಮುಖವಾದ ನಿರ್ಣಯವನ್ನ ತೆಗೆದುಕೊಂಡು ಅವಳಿನಗರದ ಪೊಲೀಸರಲ್ಲಿ ನೆಮ್ಮದಿಯನ್ನ ಮೂಡಿಸಿದ್ದಾರೆ.

ಹೌದು.. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ಯಿಯ ಪ್ರತಿ ಪೊಲೀಸ್ ಸಿಬ್ಬಂದಿಗಳಿಗೆ ತಾವೇ ಖುದ್ದಾಗಿ ಹೊಲೆಸಿದ ನಾಲ್ಕು ಮಾಸ್ಕಗಳನ್ನ ನೀಡಲಾಗಿದ್ದು, ಪ್ರತಿಯೊಬ್ಬರು ಅದನ್ನೇ ಬಳಕೆ ಮಾಡುತ್ತಿದ್ದಾರೆ.

ಸಾರ್ವಜನಿಕರ ನೆಮ್ಮದಿಗಾಗಿ ಸದಾಕಾಲ ಮುಂದಿರುವ ಪೊಲೀಸರ ಬಗ್ಗೆ ಹಿರಿಯ ಅಧಿಕಾರಿಗಳು, ಕೊರೋನಾದ ಹಾವಳಿ ಹೆಚ್ಚಾಗುವ ಮುನ್ನವೇ ಮುಂಜಾಗೃತೆಯನ್ನ ತೆಗೆದುಕೊಂಡಿದ್ದು, ಅತ್ಯುತ್ತಮ ಬೆಳವಣಿಗೆಯಾಗಿದೆ.

ಉತ್ತಮ ಗುಣಮಟ್ಟದ ಬಟ್ಟೆಯಿಂದ ಹೊಲೆಸಿದ ಮಾಸ್ಕಗಳನ್ನ, ಸ್ವಚ್ಚಗೊಳಿಸಿ ಪದೇ ಪದೇ ಬಳಕೆ ಮಾಡಬಹುದಾಗಿದೆ. ಪೊಲೀಸ್ ಕಮೀಷನರ್ ಲಾಬುರಾಮ್, ಡಿಸಿಪಿ ಆರ್.ಬಿ.ಬಸರಗಿಯವರ ನಿರ್ಣಯದಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ.


Spread the love

Leave a Reply

Your email address will not be published. Required fields are marked *