Posts Slider

Karnataka Voice

Latest Kannada News

“ಶ್ರೀಮಂತ” ಪೊಲೀಸ್ ಪ್ರಣಯ “ಕಾಂಪ್ರೂಮೈಸ್” ಬಿಜೆಪಿ ಮಾಜಿ ಸದಸ್ಯನ ಪೌರೋಹಿತ್ಯ…!

1 min read
Spread the love

ಹುಬ್ಬಳ್ಳಿ: ಎಪಿಎಂಸಿ ಕಂಡು ಬರುತ್ತಿದ್ದ ಪ್ರೇಮ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಪೊಲೀಸ್ ನ ಪ್ರೇಮ ಪ್ರಕರಣವನ್ನ ಮುಗಿಸಲು ಮುಂದಾಗಿರುವ ವಿಷಯವೀಗ ಅಮರಗೋಳದಲ್ಲಿ ಸದ್ದು ಮಾಡುತ್ತಿದೆ.

ಎರಡು ಮಕ್ಕಳ ತಂದೆಯಾಗಿರುವ ‘ಶ್ರೀಮಂತ’ ಪೊಲೀಸ್ ಕದ್ದು ಮುಚ್ಚಿ ನವಲೂರಿನ ಪೇರಲ ಹಣ್ಣು ಸವಿದಿದ್ದನಂತೆ. ಸವಿದ ಮೇಲೆ ಜೊತೆಗಿರುವ ಆಣೆ ಮಾಡಿದ್ನಂತೆ. ಆದರೆ, ಸವಿದ ರುಚಿ ಕಡಿಮೆಯಾಗಿದೆ ಎಂದು ದೂರಿಡುವ ಪ್ರಯತ್ನ ಮಾಡಿದ್ದಾನೆ ಪೊಲೀಸಪ್ಪ.

ಭಾರೀ ಫೇಮಸ್ ನವಲೂರಿನ ಪೇರಲು ತನಗಾದ ಅನ್ಯಾಯದ ವಿರುದ್ಧ ಠಾಣೆಗೆ ಬಂದು ಕುಳಿತಿದ್ದು ಕರ್ನಾಟಕವಾಯ್ಸ್.ಕಾಂನಲ್ಲಿ ಹೊರಬಿದ್ದಿತ್ತು. ಇದಾದ ಮೇಲೆ ನಡೆದಿದೆ ಮತ್ತೊಂದು ರಂಗಿನಾಟ.

ಇದೀಗ ಭಾರತೀಯ ಜನತಾ ಪಕ್ಷದಿಂದ ಪಾಲಿಕೆಯ ಸದಸ್ಯರಾಗಿದ್ದ ಮಾಜಿಯೊಬ್ಬರು, ಮೂರು ಲಕ್ಷಗಳನ್ನ “ಶ್ರೀಮಂತ’ನಿಂದ ಪಡೆದು ಹೊಂದಾಣಿಕೆ ಮಾಡಲು ಮುಂದಾಗಿದ್ದಾರೆನ್ನೋ ಮಾಹಿತಿ ಒನ್ಸ್ ಅಗೇನ್ ಎಪಿಎಂಸಿ ಸುತ್ತಲೂ ಮೆಣಸಿನಕಾಯಿ ಘಾಟದಂತೆ ಫಸರಿಸಿದೆ.

ನವಲೂರು ಪೇರಲಣ್ಣು ಮಾತ್ರ, ತನ್ನ ರುಚಿ ಕಡಿಮೆಯಾಗಿದ್ದು ಹೇಗೆ ಎಂದು ಯೋಚಿಸುತ್ತಲೇ, ರುಚಿಯುಂಡವನ ಅಂಗಳದಲ್ಲಿ ಗಿಡನೆಡುವ ಆಸಕ್ತಿ ಹೊಂದಿದ್ದಾರೆನ್ನಲಾಗುತ್ತಿದೆ.


Spread the love

Leave a Reply

Your email address will not be published. Required fields are marked *