ಕಲಘಟಗಿ ಪೊಲೀಸ್ ಠಾಣೆಗೆ ಮುತ್ತಿಗೆ…!

ಕಲಘಟಗಿ: ಅಮಾಯಕ ಯುವಕರನ್ನ ಕರೆದುಕೊಂಡು ಬಂದು ಥಳಿಸಲಾಗಿದೆ ಎಂದು ಆರೋಪಿಸಿ ನೂರಾರು ಜನರು ಕಲಘಟಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಇನ್ಸಪೆಕ್ಟರ್ ವಿರುದ್ಧ ಆಕ್ರೋಶವ್ಯಕ್ತಪಡುತ್ತಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ..
ಇಂದು ಕಲಘಟಗಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಭು ಸೂರಿನ, ತ್ರಿಬಲ್ ರೈಡಿಂಗ್ ಎಂದು ಹೇಳಿಕೊಂಡು ಬಂದು, ಯುವಕರನ್ನ ಠಾಣೆಗೆ ತಂದು ಸಿಕ್ಕಾಪಟ್ಟೆ ಥಳಸಿದ್ದಾರೆಂದು ಆರೋಪ ಮಾಡುತ್ತಿರುವ ಮಹಿಳೆಯರು ಸೇರಿದಂತೆ ನೂರಾರು ಜನರು ಠಾಣೆಗೆ ಮುತ್ತಿಗೆ ಹಾಕಿ ಯುವಕರನ್ನ ಬಿಡುವಂತೆ ಆಗ್ರಹಿಸುತ್ತಿದ್ದಾರೆ.
ಅಂಗಡಿಯಲ್ಲಿದ್ದ ಯುವಕರನ್ನೂ ಕರೆತರಲಾಗಿದೆ. ಅವಾಚ್ಯವಾಗಿಯೂ ಬೈಯ್ದು ನಿಂದನೆ ಮಾಡಲಾಗಿದೆ ಎಂದು ದೂರುತ್ತಿರುವ ಪ್ರತಿಭಟನಾಕಾರರು, ಇನ್ಸಪೆಕ್ಟರ್ ಪ್ರಭು ಸೂರಿನ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಸಾರ್ವಜನಿಕರು ಬಂದು ಠಾಣೆ ಎದುರಿಗೆ ಹೋರಾಟ ಮಾಡುತ್ತಿದ್ದರೂ, ಅದನ್ನ ತಡೆಯುವಷ್ಟು ಪೊಲೀಸ್ ಸಿಬ್ಬಂದಿಯೂ ಠಾಣೆಯಲ್ಲಿ ಇಲ್ಲದ ಸ್ಥಿತಿಯಿರುವುದರಿಂದ, ಗೊಂದಲ ಸೃಷ್ಟಿಯಾಗಿದೆ. ರಾತ್ರಿಯಾದರೂ, ಪ್ರತಿಭಟನೆ ಮುಂದುವರೆದಿದ್ದು, ಸ್ಥಿತಿ ಯಾವ ಹಂತಕ್ಕೆ ಹೋಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ.