ಶ್…..!! ಸದ್ದು….!!! ಇನ್ಸಪೆಕ್ಟರ್ ರಮೇಶ ಗೋಕಾಕ ನೋಟೀಸ್…!!!

ಹುಬ್ಬಳ್ಳಿ: ಮುಂಬರುವ ಗೌರಿ ಗಣೇಶ ಹಬ್ಬದ ಸಮಯದಲ್ಲಿ ಡಿಜೆ ಹಚ್ಚುವುದಾಗಲಿ, ಬಾಡಿಗೆಗೆ ಕೊಡುವುದಾಗಲಿ ಮಾಡಿದ್ರೇ, ಪೊಲೀಸರೇನು ಮಾಡುತ್ತಾರೆಂಬ ನೋಟೀಸ್ ವೈರಲ್ ಆಗಿದೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ರಮೇಶ ಗೋಕಾಕ ಅವರು, ಕುಸುಗಲ್ ಗ್ರಾಮದ ವ್ಯಕ್ತಿಯೊಬ್ಬರಿಗೆ ನೀಡಿರುವ ನೋಟೀಸ್ ನಲ್ಲಿ ನೀಡಿರುವ ಅಂಶಗಳು ಅದರಲ್ಲಿ ಅಡಕವಾಗಿವೆ.

ಡಿಜೆ ಮಾಲೀಕರು ಕಳೆದ ಎರಡ್ಮೂರು ವರ್ಷದಿಂದ ಕೊರೋನಾ ಹೊಡೆತದಿಂದ ಹೊರ ಬರದೇ ಸಂಕಷ್ಟದಲ್ಲಿದ್ದು, ಅವರಿಗೆ ಅನ್ಯಾಯವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ನೋಟೀಸ್ ಸಾಕಷ್ಟು ಸದ್ದು ಮಾಡುತ್ತಿದೆ.