“ಹಂಚು-ಫಿಲೋ” ತೂತು ಬಿದ್ದ ಹಣ ಮರಳಿಸಿದ ದಗಲ್ಬಾಜಿಗಳು- Big Impact…

ಹುಬ್ಬಳ್ಳಿ: ಕಳೆದ ಐದಾರು ದಿನಗಳಿಂದ ನಿರಂತರವಾಗಿ ಕರ್ನಾಟಕವಾಯ್ಸ್.ಕಾಂ ಕದ್ದು ಮುಚ್ಚಿ ನಡೆದ ಪ್ರಕರಣವೊಂದರ ವರದಿಯನ್ನ ಮಾಡುತ್ತಲೇ ಇತ್ತು. ಅದರಲ್ಲಿ ಪ್ರಮುಖವಾದವರ ಹೆಸರು ಇರಲಿಲ್ಲವಾದರೂ, ಸುದ್ದಿಯ ಹೊಡೆತದಿಂದ ಕಂಗಾಲಾದವರು ಪಡೆದ ಹಣದಲ್ಲಿ ಬಹುತೇಕವನ್ನ ಮರಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿನ ಓರ್ವ ಸಾವಿಗೀಡಾಗಿದ್ದ. ಈ ಪ್ರಕರಣದಲ್ಲಿ ಕೆಲ ಬದಲಾವಣೆ ಮಾಡುವಂತೆ ತ್ರಿ ಸ್ಟಾರ್ ಒಬ್ಬ ಐದು ಲಕ್ಷದ ಆಫರ್ ನ್ನ ಬೇರೊಬ್ಬ ಇನ್ಸಪೆಕ್ಟರ್ ಗೆ ನೀಡುವ ಸಮಯದಲ್ಲಿ, RTI ಕಾರ್ಯಕರ್ತನೋರ್ವ ಅಷ್ಟಾರಲ್ಲಾಗಲೇ ಒಂದೂವರೆ ಲಕ್ಷ ರೂಪಾಯಿ ಪೀಕಿದ್ದ.
ಈ ಎಲ್ಲ ಸಮಗ್ರ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಫಾಲೋಅಪ್ ಮಾಡತೊಡಗಿತ್ತು. ಈಗ ಶ್ರೀಮಂತನಿಗೆ ಹಣವನ್ನ ಮರಳಿಸಲಾಗಿದೆ. ಆದರೆ, ಹಣ ತಿಂದವನ ಮತ್ತೂ ಲಂಚದ ಆಮಿಷವೊಡ್ಡಿದ್ದ ತ್ರಿಸ್ಟಾರ್ ನ ಬಂಧನವಾಗದೇ ಇರುವುದು ಸೋಜಿಗ ಮೂಡಿಸಿದೆ.