Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಮುಂದುವರೆದ “ಪೊಲೀಸರ ಗಾಂಧಿಗಿರಿ”…!

1 min read
Spread the love

ಹುಬ್ಬಳ್ಳಿ: ಕೊರೋನಾ ಹೆಚ್ಚುತ್ತಿರುವ ಸಮಯದಲ್ಲಿ ಸರಕಾರ ಹೇರಿರುವ ನಿರ್ಬಂಧದಿಂದ ಕೆಲವರು ನೋವನ್ನ ಪಡುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಭಿಕ್ಷುಕರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ. ಅವರಿಗೆ ಆಸರೆಯಾಗಿ ನಿಂತಿದ್ದು ಒನ್ಸ್ ಅಗೇನ್ ಹುಬ್ಬಳ್ಳಿ ಪೊಲೀಸರು.

ಹುಬ್ಬಳ್ಳಿಯ ಬಹುತೇಕ ಭಾಗಗಳಲ್ಲಿದ್ದ ಭಿಕ್ಷುಕರಿಗೆ ಜನರೇ ಇಲ್ಲದೇ ಊಟದ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಹೊಟೇಲ್ ಗಳು ಆರಂಭವಿದ್ದವರೂ ಅವರಿಗೆ ಹಣ ಕೊಟ್ಟು ಆಹಾರವನ್ನ ಪಡೆಯಲು ಭಿಕ್ಷುಕರಿಗೆ ಸಾಧ್ಯವಾಗುತ್ತಿಲ್ಲ.

ಇದನ್ನೇಲ್ಲ ಗಮನಿಸಿದ ಹುಬ್ಬಳ್ಳಿ ದಕ್ಷಿಣ ಸಂಚಾರಿ ಠಾಣೆಯ ಪಿಎಸ್ಐ ರವಿ, ಸಿಬ್ಬಂದಿಗಳಾದ ಸಿದ್ಧಪ್ಪ ಸನ್ನಿಯವರ, ಭೀಮಪ್ಪ ಸಿಂಗನಳ್ಳಿ ಹಾಗೂ ಮಂಜುನಾಥ ಲಮಾಣಿ ಹಣವನ್ನ ಕೊಟ್ಟು, ಹಲವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಕಳೆದ ಬಾರಿ ಹಲವು ಸಂಘಗಳು ಕೆಲವೆಡೆ ಆಹಾರವನ್ನ ಹಂಚುತ್ತಿದ್ದರು. ಆದರೆ, ಈ ಸಲ ಅಂತವರು ಕಾಣದೇ ಇರುವುದು ಕೂಡಾ, ಭಿಕ್ಷುಕರು ಮರುಕಪಡುವಂತಾಗಿದೆ.


Spread the love

Leave a Reply

Your email address will not be published. Required fields are marked *