ಡ್ಯೂಟಿ ಮಾಡೋ ಪೊಲೀಸರಿಗೆ ಪರೀಕ್ಷೆ…!


ಯಾದಗಿರಿ: ಯಾರನ್ನಾದರೂ ಪ್ರಶ್ನೆ ಮಾಡುವ ಮತ್ತು ನೀವೂ ಮಾಡುತ್ತಿರುವುದು ಸರಿ ತಪ್ಪು ಎಂದು ಹೇಳಲು, ಅವರದ್ದೆ ಆದ ಕೆಪ್ಯಾಸಿಟಿ ಇರಬೇಕಲ್ಲವೇ. ಹಾಗಾಗಿಯೇ, ಮೊದಲು ಪೊಲೀಸರೇ ‘ಶಾಣ್ಯಾ’ ಆಗಬೇಕು. ಹಾಗಾಗಿಯೇ, ಅವರಿಗೊಂದು ಪರೀಕ್ಷೆಯನ್ನ ಆಯೋಜನೆ ಮಾಡಿ, ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸುರಪುರ ವಿಭಾಗದ ಡಿಸಿಪಿ ವೆಂಕಟೇಶ ಉಗಿಬಂಡಿ ಹೊಸದೊಂದು ಪರೀಕ್ಷೆಯನ್ನ ಪೊಲೀಸರಿಗಾಗಿ ನಡೆಸಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸಂಚಾರಿ ಸಪ್ತಾಹ. ಹೌದು.. ಪೊಲೀಸರಿಗೆ ತಿಳುವಳಿಕೆ ನೀಡುವ ಮುನ್ನ ಪೊಲೀಸರಿಗೆ ಈ ಬಗ್ಗೆ ಎಷ್ಟು ಗೊತ್ತಿದೆ ಎಂಬುದನ್ನ ತಿಳಿಯುವ ಪ್ರಯತ್ನಕ್ಕೆ ಸಾಹೇಬ್ರು ಮುಂದಾಗಿದ್ದಾರೆ.

ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಪೊಲೀಸರಿಗೆ ಕೂಡ ಲಿಖಿತ ರಸ ಪ್ರಶ್ನೆ ಪರೀಕ್ಷೆ ನಡೆಸಿ ಅರಿವು ಮೂಡಿಸುವ ಕೆಲಸವನ್ನ ಡಿಎಸ್ಪಿ ಮಾಡಿದ್ದಾರೆ. ಸುರಪುರ ಉಪವಿಭಾಗದ ವ್ಯಾಪ್ತಿಯ ಸುರಪುರ, ಶಹಾಪುರ ಹಾಗೂ ಹುಣಸಗಿಯ ತಾಲೂಕಿನ 15 ಕಾಲೇಜ್ ಗಳಲ್ಲಿ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಸುರಪುರ ಉಪವಿಭಾಗದ 8 ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಕೂಡ ಲಿಖಿತ ಪರೀಕ್ಷೆ ಬರೆದಿದ್ದಾರೆ. ಒಂದು ಸಾವಿರ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಉತ್ಸಾಹದಿಂದ ಪರೀಕ್ಷೆ ಬರೆದರು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಕೂಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಡ್ಯೂಟಿ ನಡುವೆ ಪರೀಕ್ಷೆ ಬರೆದು ಹೊಸ ಉತ್ಸಾಹದಲ್ಲಿದ್ದಾರೆ ಪೊಲೀಸರು. ಯಾರು ಪ್ರಶಸ್ತಿ ಗಳಿಸುತ್ತಾರೆಂಬ ಕುತೂಹಲ ಹೆಚ್ಚಾಗಿದೆ.