Posts Slider

Karnataka Voice

Latest Kannada News

“ಹಿಟ್ ಆ್ಯಂಡ್ ರನ್” ‘PSI’ ಆಗುವ ಕನಸು ಕಂಡಿದ್ದ ‘Police’ ದುರ್ಮರಣ…

1 min read
Spread the love

ತಂದೆ-ತಾಯಿ ಭೇಟಿಯಾಗಿ ಮರಳಿ ಬರುವಾಗ ದುರ್ಘಟನೆ

ರಕ್ತಸಿಕ್ತವಾಗಿ ಬಿದ್ದಿದ್ದ ಪೊಲೀಸ್ ಸಾವು

ವಿಜಯಪುರ: ತನ್ನ ಮನೆಗೆ ಹೋಗಿ ಕರ್ತವ್ಯಕ್ಕೆ ಮರಳುತ್ತಿದ್ದ ಸಮಯದಲ್ಲಿ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪೊಲೀಸನೋರ್ವ ಸಾವಿಗೀಡಾದ ಘಟನೆ ವಿಜಯಪುರದ ಸಮೀಪ ತೊರವಿ ಬಳಿ ಸಂಭವಿಸಿದೆ.

ಸಿಕಂದರ ನಾಟೀಕರ ಎಂಬ ಪೊಲೀಸ್‌ರೇ ಸಾವಿಗೀಡಾಗಿದ್ದು, ವಿಜಯಪುರದ ವೈರಲೇಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಅಥಣಿ ತಾಲೂಕಿನವರಾಗಿದ್ದು, ಅವಿವಾಹಿತರಾಗಿದ್ದರು.

ಸಿಕಂದರ ಅವರು ಪಿಎಸ್ಐ ಆಗಬೇಕೆಂದು ಪ್ರಯತ್ನ ನಡೆಸಿದ್ದರು. ಮೊದಲ ಬಾರಿಗೆ ವೈರಲೇಸ್ ವಿಭಾಗಕ್ಕೆ ಧಾರವಾಡದಲ್ಲಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ವಿಜಯಪುರಕ್ಕೆ ವರ್ಗಾವಣೆಯಾಗಿದ್ದರು.

ಘಟನೆಯ ಬಗ್ಗೆ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಪರಾರಿಯಾದ ವಾಹನದ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ.

 


Spread the love

Leave a Reply

Your email address will not be published. Required fields are marked *