Posts Slider

Karnataka Voice

Latest Kannada News

ಸಮಯಕ್ಕೆ ಬಾರದ ಅಂಬ್ಯುಲೆನ್ಸ್ ಲ್ಲೇ ಕೊರೋನಾ ಪೀಡಿತ ಕಾನ್ಸಟೇಬಲ್ ಸಾವು

1 min read
Spread the love

ಚಾಮರಾಜನಗರ : ರಾಜ್ಯ ಸರಕಾರ ಘೋಷಿಸಿದ ಕೊರೋನಾ ವಾರಿಯರ್ ಎಂದೆನಿಸಿಕೊಳ್ಳುವವರಿಗೂ ವ್ಯವಸ್ಥೆ ತನ್ನ ಅಟ್ಟಹಾಸದ ಮೂಲಕ ಬಲಿ ಪಡೆಯುತ್ತಿದೆ. ಕೊರೋನಾ ಪೀಡಿತ ಕಾನ್ಸ್ ಟೇಬಲ್ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾಗಲೂ ಅಂಬ್ಯುಲೆನ್ಸ್ ಸಮಯಕ್ಕೆ ಬಾರದಿರುವುದರಿಂದ ಮೃತಪಟ್ಟ ಘಟನೆ ಸಂಭವಿಸಿದೆ.

ನಂಜನಗೂಡು ಪಟ್ಟಣ ಪೊಲೀಸ್ ಠಾಣೆ ಕಾನ್ ಸ್ಟೇಬಲ್ ಮಹದೇವಸ್ವಾಮಿ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಸೇವೆ ಸಿಗದೇ ಸಾವನ್ನಪ್ಪಿದ್ದಾರೆ . ಆ್ಯಂಬುಲೆನ್ಸ‌ನಲ್ಲಿದ್ದ ಒಬ್ಬರೇ ಸಿಬ್ಬಂದಿ ಪರದಾಟ ಮಾಡಿರೋ ವಿಡಿಯೋ ವೈರಲ್ ಆಗಿದೆ. ಆಸ್ಪತ್ರೆ ಬಳಿ ಕಾನ್ಸ್ ಟೇಬಲ್ ಕರೆತಂದರು ಸಹಾಯಕ್ಕೆ ಆಸ್ಪತ್ರೆ ಸಿಬ್ಬಂದಿ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕಳೆದ 12 ರಂದು ರಾಪಿಡ್ ಟೆಸ್ಟ್ ನಲ್ಲಿ ಕಾನ್ಸ್ ಸ್ಟೇಬಲ್ ಗೆ ಕೊರೋನ ಪಾಸಿಟಿವ್ ಧೃಡವಾಗಿತ್ತು. ಈ ಹಿನ್ನೆಲೆಯಲ್ಲಿ ಹೋಂ ಐಸೋಲೇಷನ್ ಆಗಿದ್ದ ಕಾನ್ಸಟೇಬಲ್ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವರ್ಷದಿಂದ ನಂಜನಗೂಡು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಹಿಂದೆ‌ ಕವಲಂದೆ ಪೊಲೀಸ್ ಠಾಣೆಯಲ್ಲಿ‌ ಕರ್ತವ್ಯ‌ ನಿರ್ವಹಿಸುತ್ತಿದ್ದ ಕಾನ್ಸಟೇಬಲ್, ಮೂಲತಃ ಗುಂಡ್ಲುಪೇಟೆ ತಾಲ್ಲೂಕು ಸೋಮನಹಳ್ಳಿ ಗ್ರಾಮದವರು. ರಾತ್ರಿ 7 ಗಂಟೆಗೆ ಉಸಿರಾಟದ ತೊಂದರೆಯಿಂದ ಬಳಲಿ ಆ್ಯಂಬುಲೆನ್ಸ್‌ನಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸರಕಾರ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೇ ಜನರನ್ನ ಕಾಪಾಡಲು ಹಗಲಿರುಳು ದುಡಿಯುವ ಜೀವಗಳಿಗೂ ಕಂಟಕವಾಗಲಿದೆ.


Spread the love

Leave a Reply

Your email address will not be published. Required fields are marked *