“ಬಪ್ಪಾ ಸೋರೋ ಖೂನ್ಕಿದೊ” ಪೊಲೀಸ್ ಕಮೀಷನರ್ ಲಾಬುರಾಮ್ ಬಿಚ್ಚಿಟ್ಟ ಸತ್ಯ…!!!

ಹುಬ್ಬಳ್ಳಿ: ಮಗ ಕಾಣೆಯಾಗಿದ್ದಾನೆಂದು ಸುಫಾರಿ ನೀಡಿ ಕೊಲೆ ಮಾಡಿಸಿದ್ದ ತಂದೆಯ ಸಮೇತ ಏಳು ಜನ ಆರೋಪಿಗಳನ್ನ ಬಂಧನ ಮಾಡಿರುವುದಾಗಿ ಪೊಲೀಸ್ ಕಮೀಷನರ್ ಲಾಬುರಾಮ್ ಹೇಳಿದರು.
ಅಖಿಲ ಜೈನ್ ಉರ್ಫ್ ಮಹಾಜನಶೇಠ ಎಂಬ ಯುವಕನ ಹತ್ಯೆಯನ್ನ ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿ ಮಾಡಿರುವ ಪ್ರಕರಣವನ್ನ ಭೇದಿಸಲಾಗಿದೆ ಎಂದು ಹೇಳಿದರು.
ಕಮೀಷನರ್ ಲಾಬುರಾಮ್ ಅವರು ಮಾತನಾಡಿರುವ ಸಮಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಪ್ರಮುಖ ಅಂಶಗಳು…
ಉದ್ಯಮಿ ಪುತ್ರನ ಸುಪಾರಿ ಹತ್ಯೆ ಪ್ರಕರಣ
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ ಹೇಳಿಕೆ
ಸವಾಲಾಗಿರುವ ಈ ಪ್ರಕರಣವನ್ನ ನಮ್ಮ ಪೊಲೀಸರು ಭೇದಿಸಿದ್ದಾರೆ
ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು
ಕೆಲವರು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು
ಯುವಕನ ಮಿಸ್ಸಿಂಗ್ ಬಹಳ ಅನುಮಾನ ಮೂಡಿಸಿತ್ತು
ಆಗ ನಮ್ಮ ಸಿಬ್ಬಂದಿ ಯುವಕನ ತಂದೆಯನ್ನ ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ
ವ್ಯಾಪಾರದ ಉದ್ದೇಶಕ್ಕಾಗಿ ಕಲಘಟಗಿಗೆ ತಂದೆ ಮಗ ಇಬ್ಬರು ಹೋಗಿ, ತಂದೆ ಮಾತ್ರ ವಾಪಸ್ ಆಗಿದ್ದ
ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು
ವ್ಯಾಪಾರಕ್ಕಾಗಿ ಕಲಘಟಗಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ
ತಂದೆಯನ್ನ ತೀವ್ರ ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದೆ
ಈಗಾಗಲೇ ಏಳು ಜನರನ್ನ ಬಂಧಿಸಿದ್ದೇವೆ
ಉಸಿರುಗಟ್ಟಿಸಿ ಯುವಕನನ್ನ ಕೊಲೆ ಮಾಡಿದ್ದಾರೆ
ನಮ್ಮ ಸಿಬ್ಬಂಧಿ ಭರತನನ್ನ ವಿಚಾರಣೆ ನಡೆಸಿದಾಗ ಪ್ರಕರಣವನ್ನ ದಿಕ್ಕು ತಪ್ಪಿಸಲು ನೋಡಿದ್ರು
ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ತನಿಖೆಗೆ ಪುಷ್ಟಿ ಬಂತು
ವ್ಯಯಕ್ತಿಕ ಕಾರಣಗಳಿಂದ ತಂದೆನೇ ಮಗನನ್ನ ಕೊಲೆ ಮಾಡಿಸಿದ್ದು ದೃಡವಾಗಿದೆ
ಸಧ್ಯ ಏಳು ಆರೋಪಿಗಳ ವಿಚಾರಣೆ ಮುಂದುವರೆದಿದೆ
ವಿಚಾರಣೆ ನಂತ್ರ ಕೊಲೆಗೆ ಮೂಲ ಕಾರಣ ಗೊತ್ತಾಗಲಿದೆ
ಕೊಲೆ ಪ್ರಕರಣವನ್ನ ಭೇದಿಸಿದ ಪೊಲೀಸ್ ತಂಡಕ್ಕೆ 50 ಸಾವಿರ ಬಹುಮಾನ ಘೋಷಣೆ ಮಾಡಿದ ಆಯುಕ್ತ ಲಾಬುರಾಮ್