Posts Slider

Karnataka Voice

Latest Kannada News

ಬೆಳಗಾವಿಯ ಇಬ್ಬರನ್ನ ಹುಬ್ಬಳ್ಳಿಯಲ್ಲಿ ಹೆಡಮುರಿಗೆ ಕಟ್ಟಿದ CCB ಪೊಲೀಸರು- ಜೀವಂತ ಗುಂಡುಗಳ ಸಮೇತ ಕಂಟ್ರಿ ಪಿಸ್ತೂಲ್, ಗಾಂಜಾ ವಶ…

1 min read
Spread the love

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಬೆಳಗಾವಿ ಜಿಲ್ಲೆಯ ರೋಷನ್ ಜಮೀರ್ ಹಾಗೂ ಹಜರತ್ ಅಲಿ ಎಂಬಾತರು ಮುಂದಾಗಿದ್ದಾರೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಒಂದು ಕಂಟ್ರಿ ಪಿಸ್ತೂಲ್ (ಆರು ಜೀವಂತ ಗುಂಡುಗಳು) ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿವೆ ಎಂಬ ಮಾಹಿತಿಯಿದೆ.

ಕಾರ್ಯಾಚರಣೆಯಲ್ಲಿ ಎಸಿಪಿ ಎಸ್.ಪಿ ಒಡೆಯರ್, ಪಿಎಸ್ಐ ದೇವೆಂದ್ರಪ್ಪ, ಸಿಸಿಬಿ ಇನ್ಸ್‌ಪೆಕ್ಟರ್ ಮಾರುತಿ ಗುಳ್ಳಾರಿ, ಎಎಸ್ಐ ಲಂಗೋಟಿ, ಧಾರವಾಡ, ಭಜಂತ್ರಿ, ಹುಗ್ಗಿ, ಕುರಿ, ರಾಜೇಸಾಬ ಗುಂಜಾಳ, ಎಸ್.ಐ ಕಡೇಮನಿ ಸೇರಿದಂತೆ ಭಾಗಿಯಾಗಿದ್ದರು.


Spread the love

Leave a Reply

Your email address will not be published. Required fields are marked *

You may have missed