Posts Slider

Karnataka Voice

Latest Kannada News

“ಪ್ರೀತಿಯ ಪಾರಿವಾಳ” ಹಾರಿ ಹೋತೊ ಗೆಳೆಯಾ- ಹುಬ್ಬಳ್ಳಿ ಪೊಲೀಸರಿಗೆ ತಪ್ಪದ “ಗೋಳು”…

1 min read
Spread the love

ಹುಬ್ಬಳ್ಳಿ: ತಮ್ಮದೇ ಮನೆಯಲ್ಲಿ ಸಾಕುತ್ತಿದ್ದ ಪಾರಿವಾಳಗಳ ಪ್ರಾಣವನ್ನ ದುಷ್ಕರ್ಮಿಗಳು ತೆಗೆದು ಹೋಗಿದ್ದಾರೆಂದು ಹುಬ್ಬಳ್ಳಿಯ ಹೊಸೂರಿನ ರಾಹುಲ್ ದಾಂಡೇಲಿ ಪೊಲೀಸರಿಗೆ ದೂರು ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಕಪಾಟಿನಲ್ಲಿದ್ದ 23 ಪಾರಿವಾಳಗಳ ಕತ್ತನ್ನ ಕೊಯ್ದು ಹತ್ಯೆ ಮಾಡಲಾಗಿದೆ. ಘಟನೆಯೂ ಕಳೆದ ಎರಡು ದಿನಗಳ ಹಿಂದೆ ನಡೆದಿದೆ.

ಈ ಬಗ್ಗೆ ದೂರು ಪಡೆದುಕೊಂಡಿರುವ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು, ಕತ್ತು ಕೊಯ್ದು ಪರಾರಿಯಾಗಿರುವ ಆರೋಪಿಗಳ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ಧಾರವಾಡದಲ್ಲಿ ಕೃಷಿ ಮೇಳ, ಅವಳಿನಗರದಲ್ಲಿ ಹಬ್ಬಗಳ ಬಂದೋಬಸ್ತ್‌ ನಿರಂತರವಾಗಿ ನಡೆಯುತ್ತಿರುವ ಇಂತಹ ಸಂದರ್ಭಗಳಲ್ಲಿ, ಈ ಥರದ ಪ್ರಕರಣಗಳು ಪೊಲೀಸರಿಗೆ ತಲೆ ನೋವುಂಟು ಮಾಡುತ್ತಿವೆ.


Spread the love

Leave a Reply

Your email address will not be published. Required fields are marked *