Posts Slider

Karnataka Voice

Latest Kannada News

ಸಾಧನೆ ಮಾಡಿ ಬಂದ್ ಪಿಐ ಚೆನ್ನಣ್ಣನವರಿಗೆ ಚಪ್ಪಾಳೆ ತಟ್ಟಿದ ಸಿಬ್ಬಂದಿ..!

1 min read
Spread the love

ಧಾರವಾಡ: ಮಹಾರಾಷ್ಟ್ರದ ಅಹಮದನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿ ಬಂದ ಹೆಸ್ಕಾಂ ಜಾಗೃತದಳದ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರನ್ನ ಧಾರವಾಡ ಸಂಚಾರಿ ಠಾಣೆಯ ಸಿಬ್ಬಂದಿಗಳು ಆತ್ಮೀಯವಾಗಿ ಸತ್ಕರಿಸಿದರು.

ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಧಾರವಾಡದ ನಿವಾಸಕ್ಕೆ ಬಂದಿರುವುದನ್ನ ಖಚಿತವಾದ ತಕ್ಷಣವೇ ಅಭಿಮಾನದಿಂದ ಮನೆಗೆ ತೆರಳಿದ ಸಿಬ್ಬಂದಿಗಳು, ಇನ್ಸಪೆಕ್ಟರ್ ಚೆನ್ನಣ್ಣನವರ ಸಾಧನೆಯ ಮೆಚ್ಚಿ, ಸತ್ಕರಿಸಿದರು.

ಧಾರವಾಡ ಸಂಚಾರಿ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರೋ ಮುರುಗೇಶ ಚೆನ್ನಣ್ಣನವರ, ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನ ಹೊಂದಿದ್ದಾರೆ. ಸತ್ಕಾರ ಸ್ವೀಕರಿಸಿದ ನಂತರ ಮಾತನಾಡಿದ ಮುರುಗೇಶ ಚೆನ್ನಣ್ಣನವರ, ಎಲ್ಲರ ಶುಭ ಹಾರೈಕೆಯಿಂದ ನಾನು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲೂ ನಿಮ್ಮೇಲ್ಲರ ಹಾರೈಕೆ ನನ್ನ ಮೇಲಿರಲಿ ಎಂದರು.

ಪಿಎಸ್ಐ ಜಿ.ಎನ್.ಗುರ್ಲಹೊಸೂರು, ಎಎಸ್ಐ ಬಿ.ಎಸ್.ಕುರಿ, ಅಬ್ದುಲಹಮೀದ ಹಬೀಬ, ಬಸಯ್ಯ ಸುತಗಟ್ಟಿಮಠ, ಹನಮಂತಪ್ಪ ರೊಳ್ಳಿ, ದೇಪನಗೌಡರ, ಭೀಮನಗೌಡ, ಅಲಿ ಹಾಡಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *