Posts Slider

Karnataka Voice

Latest Kannada News

ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆ ಶೀಘ್ರ ಈಡೇರಿಕೆ: ಸಚಿವ ಸುರೇಶಕುಮಾರ

1 min read
Spread the love

ಧಾರವಾಡ: ದೈಹಿಕ ಶಿಕ್ಷಣ ಶಿಕ್ಷಕರ ಬಹುತೇಕ ಸಮಸ್ಯೆಗಳನ್ನ ಶೀಘ್ರವಾಗಿ ಈಡೇರಿಸುವ ಭರವಸೆಯನ್ನ ರಾಜ್ಯದ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ನೀಡಿದ್ದು, ಶಿಕ್ಷಕರಲ್ಲಿ ಸಂತಸ ಮೂಡಿಸಿದೆ.

ಧಾರವಾಡದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಡಾ.ಆಶಾಬೇಗಂ ಮುನವಳ್ಳಿ ಮತ್ತಿತರ ಜೊತೆಗೆ ಮಾತನಾಡಿದ ಶಿಕ್ಷಣ ಸಚಿವರು, ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆಗಳನ್ನ ಸಂಪೂರ್ಣವಾಗಿ ಆಲಿಸಿದರು.

ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಕೂಡಾ ಯಾವುದೇ ಕಾರಣಕ್ಕೂ ದೈಹಿಕ ಶಿಕ್ಷಣ ಶಿಕ್ಷಕರನ್ನ ಬೇರೆ ಶಾಲೆಗೆ ವರ್ಗಾವಣೆ ಮಾಡುವುದಿಲ್ಲವೆಂದು ಸಚಿವ ಸುರೇಶಕುಮಾರ ಭರವಸೆ ನೀಡಿದ್ದು, ಶೀಘದಲ್ಲಿ ತಾಲೂಕಿಗೆ ಒಬ್ಬರನ್ನ ಬಿಆರ್ ಪಿ, ಇಬ್ಬರನ್ನ ಸಿಆರ್ ಪಿಗಳ ಜೊತೆಗೆ ತಾಲೂಕು ದೈಹಿಕ ಪರಿವೀಕ್ಷಕರನ್ನ ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಹೇಳಿದರು.

ಪರೀಕ್ಷೆ ನಡೆಯಯು ಸಮಯದಲ್ಲಿ ದೈಹಿಕ ಶಿಕ್ಷಣದ ಅಂಕಗಳನ್ನೂ ಸೀಟ್ ನಲ್ಲಿ ನಮೂದು ಮಾಡುವ ವ್ಯವಸ್ಥೆ ಕಲ್ಪಿಸುವುದಾಗಿ ಸಚಿವ ಸುರೇಶಕುಮಾರ ಹೇಳಿದ್ದು, ಬಹುತೇಕ ಬೇಡಿಕೆಗಳನ್ನ ಸಮಚಿತ್ತವಾಗಿ ಸಚಿವರು ಆಲಿಸಿದ್ದಾರೆ.

ಸಚಿವರೊಂದಿಗೆ ಭೇಟಿಯಾದ ಶಿಕ್ಷಕರು ಪ್ರತಿಯೊಂದು ಸಮಸ್ಯೆಗಳ ಬಗ್ಗೆ ವಿವರವಾಗಿ ಹೇಳಿದಾಗಲೂ, ತಾಳ್ಮೆಯಿಂದ ಸಚಿವ ಸುರೇಶಕುಮಾರ ಕೇಳಿದ್ದರಿಂದ, ದೈಹಿಕ ಶಿಕ್ಷಣ ಶಿಕ್ಷಕರು ತಮ್ಮ ಬೇಡಿಕೆ ಬೇಗ ಈಡೇರಲಿವೆ ಎಂಬ ಆಶಾಭಾವ ಹೊಂದಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed