Posts Slider

Karnataka Voice

Latest Kannada News

ಬಸಾಪೂರದ ಬಳಿಯೇ ಮತ್ತೊಂದು ಯುವಕನ ಶವ ಪತ್ತೆ

1 min read
Spread the love

ಹುಬ್ಬಳ್ಳಿ: ತಾಲೂಕಿನ ಕಿರೇಸೂರು ಗ್ರಾಮದ ಬಳಿ ನಡೆದಿರುವ ಮೂರು ಯುವಕರ ನೀರು ಪಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ಗಂಟೆಯ ಹಿಂದೆ ಶವವೊಂದು ದೊರಕಿತ್ತು, ಇದೀಗ ಎರಡನೇಯ ಶವ ದೊರಕಿದ್ದು, ಮತ್ತೊಂದು ಯುವಕನಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ನಿನ್ನೆ ಇಳಿಸಂಜೆ ಬೆಳಿಕಿಗೆ ಬಂದಿದ್ದ ಘಟನೆಗೆ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಲಾಗಿತ್ತು. ತಡರಾತ್ರಿ ಬೆಳಕಿನ ಸಮಸ್ಯೆಯಾಗಿದ್ದರಿಂದ ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆದಿದ್ದು, ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಬಳಿ ಎರಡು ಶವಗಳು ದೊರಕಿವೆ.   ಪೂನಾ ಮೂಲದ ಗಜಾನನ ರಾಜಶೇಖರ ಹಾಗೂ ಜೋಶಿ ಕ್ಲೆಮೆಂಟ್ ಜಂಗಮ ಎಂಬ ಇಬ್ಬರ ಶವಗಳು ದೊರಕಿವೆ. ಇವರಿಬ್ಬರು  ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಸುವರ್ಣ ಕಲ್ಲಂಗುಟ್ಲಾರ ಸಂಬಂಧಿಯಾಗಿದ್ದು, ಇವರ ಮಗ ಸನ್ನಿಗಾಗಿ ಹುಡುಕಾಟ ಮುಂದುವರೆದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಿರಂತರವಾಗಿ ಹುಡುಕಾಟ ಆರಂಭಿಸಿದ್ದು, ಯುವಕರ ಅಜಾಗರೂಕತೆಯಿಂದಲೇ ಇಂತಹದೊಂದು ದುರಂತ ಸಂಭವಿಸಿದೆ.


Spread the love

Leave a Reply

Your email address will not be published. Required fields are marked *