Posts Slider

Karnataka Voice

Latest Kannada News

ವಿಷ ಸೇವಿಸಿದ್ದ PDO ಪ್ರಕರಣ ಹಸಿರುವಾಗಲೇ ಮತ್ತೋರ್ವ PDO ನೇಣಿಗೆ ಶರಣು…!

1 min read
Spread the love

ಆರ್‌ಟಿಐ ಕಾರ್ಯಕರ್ತನ ಕಿರುಕುಳದಿಂದ ವಿಷ ಸೇವಿಸಿದ್ದ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಪ್ರಕರಣದಲ್ಲಿ ಪಿಡಿಓ ಸಾವು…

ಮುಂಡಗೋಡ: ಗ್ರಾಮ ಪಂಚಾಯತ ಪಿಡಿಓವೊಬ್ಬರು (ಪ್ರಭಾರ ಪಿಡಿಓ) ತಮ್ಮದೆ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಿಂದ ನಡೆದಿದೆ.

ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ(39) ಎಂಬುವವರೇ ನೇಣಿಗೆ ಶರಣಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮ ಪಂಚಾಯತಿಯ ಪ್ರಭಾರ ಪಿಡಿಓ (PDO) ಆಗಿ ಕಾರ್ಯನಿರ್ವಹಿಸುತ್ತಿದ್ದರು.

ನಿನ್ನೆ ರವಿವಾರ ರಜೆ ಇದ್ದ‌ ಕಾರಣ ರಾಮಲಿಂಗ ಕಳಸಗೇರಿ ಸನವಳ್ಳಿಯಲ್ಲಿ ತಮ್ಮ ಮನೆಗೆ ಬಂದಿದ್ದರು, ಇವರು ಇಂದು ಏಕಾಏಕಿ ತೋಟದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *