Posts Slider

Karnataka Voice

Latest Kannada News

PDO ಲಂಚಗುಳಿತನ- ACB ಬಲೆಗೆ….!

Spread the love

ಚಿತ್ರದುರ್ಗ: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೋರ್ವರು ಎರಡು ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ತಾಳ್ಯ ಗ್ರಾಮದಲ್ಲಿ ನಡೆದಿದೆ.

ನೆರಳಕಟ್ಟೆ ಗ್ರಾಮದ ಶ್ರೀಮೂರ್ತೆಪ್ಪ ಎಂಬುವವರಿಗೆ ಈ ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆಯಿಟ್ಟಿದ್ದ ಪಿಡಿಓ ಪ್ರದೀಪಕುಮಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ದೂರದಾರ ಹಣ ಕೊಡುವಾಗಲೇ ಎಸಿಬಿ ತಂಡ ಪಿಡಿಓರನ್ನ ಟ್ರ್ಯಾಪ್ ಮಾಡಿದೆ.

ಪಿಡಿಓ ಸಿ.ಪ್ರದೀಪಕುಮಾರ ಲಂಚದ ಬೇಡಿಕೆಯಿಟ್ಟು ಹಣ ಕೊಡದೇ ಇದ್ದಾಗ ಸತಾಯಿಸಿದ್ದ. ಇದರಿಂದ ಬೇಸತ್ತ ಶ್ರೀಮೂರ್ತೆಪ್ಪ, ಎಸಿಬಿಗೆ ದೂರು ನೀಡಿದ್ದರು. ದೂರು ಪಡೆದ ಎಸಿಬಿ ತಂಡ ಹಣದ ಸಮೇತ ಪಿಡಿಓರನ್ನ ಟ್ರ್ಯಾಪ್ ಮಾಡಲು ಯಶಸ್ವಿಯಾಗಿದ್ದಾರೆ.

ಗ್ರಾಮ ಪಂಚಾಯತಿಯನ್ನ ಮತ್ತಷ್ಟು ಬೆಳವಣಿಗೆ ಮಾಡಬೇಕೆಂದು ಸೃಷ್ಟಿಸಿದ ಪಿಡಿಓ ಹುದ್ದೆ ಇಂದು ಭ್ರಷ್ಟಾಚಾರದ ಬಾಗಿಲ್ಲಾಗಿದ್ದು, ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.


Spread the love

Leave a Reply

Your email address will not be published. Required fields are marked *