Posts Slider

Karnataka Voice

Latest Kannada News

ರಾಯಚೂರು-ಪೇದೆಯ ಲಂಚಾವತಾರ ವೈರಲ್-  ಬೈಕ್ ಲ್ಲಿ ಬರ್ತಾರೆ ದುಡ್ಡು ಕೀಳ್ತಾನೆ-ಹೊರಡ್ತಾನೆ..

1 min read
Spread the love

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಬಡವರನ್ನ ಪೀಕುವ ಪೊಲೀಸ್ ಪೇದೆಯ ಮುಖವಾಡ ಬಯಲಾಗಿದ್ದು, ರಾಜಾರೋಷವಾಗಿಯೇ ಮಂತ್ಲಿ ಇಸಿದುಕೊಳ್ಳುವುದನ್ನ ವೀಡಿಯೋ ಮಾಡಲಾಗಿದ್ದು, ಇದೀಗ ಈ ಪೇದೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿ ಬರುತ್ತಿದೆ.

ವೈರಲ್ ವೀಡಿಯೋ ಇಲ್ಲಿದೆ ನೋಡಿ

ಸಿರವಾರ ಪೊಲೀಸ್ ಠಾಣೆಯ ವಿಜಯ ಎಂಬ ಪೇದೆಯೇ ಟಂ ಟಂ ಮಾಲೀಕರಿಂದ ಹಣ ಪಡೆಯುತ್ತಿರುವುದು ವೈರಲ್ ಆಗಿದೆ. ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಿಲ್ಲಿಸಿ ಲಂಚ ಪಡೆಯಲಾಗತ್ತೆ.

ಇಂತಹ ಪೊಲೀಸ್ ರಿಂದಲೇ ಇಲಾಖೆಯ ಮಾನ ಹರಾಜಾಗುತ್ತಿದ್ದು, ಇಂಥವರಿಗೆ ಕಾನೂನು ಪಾಠವನ್ನ ಅಧಿಕಾರಿಗಳೇ ಕಲಿಸಬೇಕೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ. ಆ ಪ್ರಜ್ಞಾವಂತಿಕೆಯನ್ನ ಅಧಿಕಾರಿಗಳು ತೋರಿಸುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *