Posts Slider

Karnataka Voice

Latest Kannada News

“ಪೈರಿಂಗ್ ಕೇಸ್” ಪವನ ಕುಲಕರ್ಣಿ, ಸುಶಾಂತ ಅಗರವಾಲ್ ಅರೆಸ್ಟ್….

1 min read
Spread the love

ಧಾರವಾಡ: ನಗರದ ಹತ್ತಿಕೊಳ್ಳದ ಬಳಿ ನಡೆದ ಪೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ ಕುಲಕರ್ಣಿ ಹಾಗೂ ಸುಶಾಂತ ಅಗರವಾಲ್ ಅವರನ್ನ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಹತ್ತಿಕೊಳ್ಳದ ಸರ್ವೇ ನಂಬರ 81ಅ/10ಆ/2 ರ ಪೈಕಿ 15 ಎಕರೆ ಜಮೀನಿನಲ್ಲಿ ಹನ್ನೆರಡಕ್ಕೂ ಹೆಚ್ಚು ಜನರನ್ನ ಮಾರಕಾಸ್ತ್ರಗಳ ಸಮೇತ ಇದ್ದರೆಂಬ ಆರೋಪದಲ್ಲಿ ಪವನ ಕುಲಕರ್ಣಿ ಮೇಲೆ ಪ್ರಕರಣ ದಾಖಲಾಗಿತ್ತು. ಇದೇ ಸ್ಥಳದಲ್ಲಿ ಸುಶಾಂತ ಅಗರವಾಲ್ ಪೈರಿಂಗ್ ಮಾಡಿದ್ದರೆಂಬ ಪ್ರತ್ಯೇಕ ದೂರು ದಾಖಲಾಗಿತ್ತು.

ದೂರು-ಪ್ರತಿ ದೂರು ಪಡೆದುಕೊಂಡಿದ್ದ ವಿದ್ಯಾಗಿರಿ ಠಾಣೆಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಪವನ ಕುಲಕರ್ಣಿ ಜೊತೆಗಿದ್ದ ಅಪರಿಚಿತ 12 ಕ್ಕೂ ಹೆಚ್ಚು ಜನರ ಹುಡುಕಾಟ ಆರಂಭಿಸಿದ್ಸಾರೆ.

ಈ ಪ್ರಕರಣ ಬೆಳಗಿನಿಂದ ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.


Spread the love

Leave a Reply

Your email address will not be published. Required fields are marked *