ಪಶುಪತಿಹಾಳದಲ್ಲಿ ಡಾ.ಅಂಬೇಡ್ಕರ ಭಾವಚಿತ್ರ ಹರಿದ ದುಷ್ಕರ್ಮಿಗಳು…!
1 min readಕುಂದಗೋಳ: ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಹಾಕಲಾಗಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರವನ್ನ ದುಷ್ಕರ್ಮಿಗಳು ಹರಿದು ಹಾಕಿದ್ದು, ಗ್ರಾಮದಲ್ಲಿ ಪ್ರತಿಭಟನೆ ಆರಂಭಗೊಂಡಿದೆ.
ಹೋರಾಟ ನಡೆಸುತ್ತಿರುವ ವೀಡಿಯೋ..
ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಆಚರಣೆಯಾದ ಮೂರೇ ದಿನದಲ್ಲಿ ದುಷ್ಕರ್ಮಿಗಳು ಭಾವಚಿತ್ರವನ್ನ ಹರಿದು ಹಾಕಿದ್ದು, ಗ್ರಾಮದ ಹಲವರಲ್ಲಿ ಆಕ್ರೋಶ ಮೂಡಿಸಿದ್ದು, ತಕ್ಷಣವೇ ಆರೋಪಿಗಳನ್ನ ಬಂಧನ ಮಾಡುವಂತೆ ಆಗ್ರಹಿಸಿದ್ದಾರೆ.
ಭಾವಚಿತ್ರವನ್ನ ಹರಿದ ಜಾಗದಲ್ಲೇ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆದಿದ್ದು, ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಗ್ರಾಮದಲ್ಲಿ ಅಶಾಂತಿ ಮೂಡಿಸಲು ಇಂತಹ ಕೃತ್ಯ ಎಸಗಲಾಗಿದ್ದು, ತಕ್ಷಣವೇ ಆರೋಪಿಗಳನ್ನ ಬಂಧನ ಮಾಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.
ಕರ್ನಾಟಕ ದಲಿತ ವಿಮೋಚನೆಯ ರಾಜ್ಯಾಧ್ಯಕ್ಷ ಸುರೇಶ ಖಾನಾಪೂರ, ಶಹರ ಘಟಕದ ತಾಲೂಕ ಅಧ್ಯಕ್ಷ ಶ್ರೀಧರ್ ಕರೋಗಲ್, ಕೆಂಚಪ್ಪ ಮಲ್ಲನ್ನವರ, ಸಿದ್ದು ಮಲ್ಲಣ್ಣವರ್, ಸುರೇಶ ಶಿವಣ್ಣವರ, ವಿನಾಯಕ ಮನ್ನಾಳಕಿ, ಮಂಜುನಾಥ ತಳಗೇರಿ, ಕೊಟೇಶ್ ತಳಗೇರಿ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.