Posts Slider

Karnataka Voice

Latest Kannada News

ಸೋಮಾಪುರದಲ್ಲಿ ರಸ್ತೆಯಲ್ಲೇ ಕಣ್ಣೀರಿಟ್ಟ ರೈತ- ಲಕ್ಷ ಮೌಲ್ಯದ ಎತ್ತು ವಿದ್ಯುತ್‌ಗೆ ಬಲಿ… Exclusive Video

1 min read
Spread the love

ವಿದ್ಯುತ್ ತಂತಿ ತುಳಿದು ಎತ್ತು ಸಾವು, ಗೋಳಾಡಿದ ಯುವಕ

ಧಾರವಾಡ: ಹೊಲದಿಂದ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಗಾಳಿಗೆ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎತ್ತೊಂದು ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಸಂಭವಿಸಿದೆ.

ಸೋಮಾಪುರ ಗ್ರಾಮದ ಗಿರಿಯಪ್ಪ ಉಳ್ಳಾಗಡ್ಡಿ ಎಂಬ ರೈತನಿಗೆ ಸೇರಿದ ಅಂದಾಜು ಒಂದು ಲಕ್ಷ ರೂಪಾಯಿ ಮೌಲ್ಯದ ಎತ್ತು ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದೆ.

ರೈತ ಚಕ್ಕಡಿ ಹೂಡಿಕೊಂಡು ಹೊಲದಿಂದ ವಾಪಸ್‌ ಬರುತ್ತಿದ್ದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ವಿದ್ಯುತ್‌ ತಂತಿ ಗಾಳಿಗೆ ತುಂಡರಿಸಿ ಬಿದ್ದಿತ್ತು. ಈ ತಂತಿ ತುಳಿದ ಎತ್ತು ಸ್ಥಳದಲ್ಲೇ ಅಸುನೀಗಿದೆ. ಕೂಡಲೇ ಎಚ್ಚೆತ್ತ ರೈತ ಚಕ್ಕಡಿಯಿಂದ ಜಿಗಿದು ತನ್ನ ಪ್ರಾಣ ಕಾಪಾಡಿಕೊಳ್ಳುವುದರ ಜೊತೆಗೆ ಇನ್ನೊಂದು ಎತ್ತಿನ ಪ್ರಾಣವನ್ನೂ ಕಾಪಾಡಿದ್ದಾನೆ.

ತಮ್ಮ ಎತ್ತು ಕಳೆದುಕೊಂಡ ಉಳ್ಳಾಗಡ್ಡಿ ಕುಟುಂಬದ ಯುವಕ ಸಾವಿಗೀಡಾದ ಎತ್ತಿನ ಮುಂದೆ ಕುಳಿತು ಗೋಳಾಡಿದ ಪ್ರಸಂಗ ನಡೆಯಿತು. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


Spread the love

Leave a Reply

Your email address will not be published. Required fields are marked *