Posts Slider

Karnataka Voice

Latest Kannada News

ಬೈರಿದೇವರಕೊಪ್ಪದಲ್ಲಿ ಸಿಕ್ಕ “ಆ ಕಿರಾತಕರು”: ಕಮೀಷನರ್, ಡಿಸಿಪಿ ಹೇಳಿದ್ದೇನು ಗೊತ್ತಾ…!?

Spread the love

ಚಾಕು ಇರಿದು ಪರಾರಿಯಾಗುತ್ತಿದ್ದ ರೌಡಿ ಶೀಟರ್ ನನ್ನು;ಒಂದೇ ಗಂಟೆಯಲ್ಲಿ ಚೇಸ್ ಮಾಡಿ ಹಿಡಿದ ಪೊಲೀಸರು

ಹುಬ್ಬಳ್ಳಿ: ಬಡ್ಡಿ ಹಣವನ್ನು ಕೊಡಲಿಲ್ಲ ಎಂದು ಆಟೋ ಚಾಲಕನಿಗೆ ತನ್ನ ಸಹಚರಣ ಜೊತೆ ಸೇರಿ ಚಾಕು ಇರಿದು ಕೊಲೆಗೆ ಯತ್ನಿಸಿ ಹುಬ್ಬಳ್ಳಿ ಬಿಟ್ಟು ಓಡಿ ಹೋಗುತ್ತಿದ್ದ ರೌಡಿ ಶೀಟರ್ ನನ್ನು ಪೊಲೀಸರು ಒಂದೇ ಗಂಟೆಯಲ್ಲಿ ಚೇಸ್ ಮಾಡಿ ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ.

ಎಸ್… ನಗರದ ಕಾರವಾರ ರಸ್ತೆಯಲ್ಲಿ ಬುಧವಾರ ಸಾಯಂಕಾಲ ಆಟೋಚಾಲಕ ತೌಶೀಫ್ ಮುಲ್ಲಾ ಎಂಬಾತನಿಗೆ ರೌಡಿ ಶೀಟರ್ ಪ್ರಮೋದ ಮಾನೆ ಎಂಬಾತ,ಬಡ್ಡಿಯ ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ತನ್ನ ಸಹಚರ ವಿಶಾಲ್ ಜೊತೆ ಸೇರಿ ತೌಶೀಫ್ ಹೊಟ್ಟೆಗೆ ಚಾಕು ಇರಿದು ಕೊಲೆಗೆ ಯತ್ನಿಸಿ ಅಲ್ಲಿಂದ ಪರಾರಿಯಾಗಿದ್ದ.

Exclusive video

ಇತ್ತ ನಡು ರಸ್ತೆಯಲ್ಲಿಯೇ ಒದ್ದಾಡುತ್ತಾ ಬಿದ್ದಿದ್ದ ತೌಶೀಫ್ ನನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿ,ಚಾಕು ಇರಿದು ಪರಾರಿಯಾಗುತ್ತಿದ್ದ ರೌಡಿ ಶೀಟರ್ ಪ್ರಮೋದ್ ಬೆನ್ನು ಬಿದ್ದಿದ್ದರು,ಕೇವಲ ಒಂದು ಗಂಟೆಯ ಅವಧಿಯಲ್ಲಿ ಆರೋಪಿಗಳು ಹುಬ್ಬಳ್ಳಿ ಬಿಟ್ಟು ಬೇರೆಡೆ ಹೊರಟ ಮಾಹಿತಿ ತಿಳಿಯುತ್ತಿದ್ದ ಹಾಗೆ ಆರೋಪಿಗಳನ್ನು ಬೈರಿದೇವರಕೊಪ್ಪದ ಬಳಿ ಹಳೇ ಹುಬ್ಬಳ್ಳಿ ಪೋಲೀಸ್ರು ಚೇಸ್ ಮಾಡಿ ಹಿಡಿದಿದ್ದಾರೆ.

ಸದ್ಯ ಬಡ್ಡಿಯ ದುಡ್ಡಿನ ಆಸೆಗೆ ಆಟೋ ಚಾಲಕನ ಮೇಲೆ ಚಾಕು ಇರಿದು ಅಟ್ಟಹಾಸ ಮೆರೆದಿದ್ದ ರೌಡಿ ಶೀಟರ್ ಪ್ರಮೋದ ಹಾಗೂ ಆತನ ಸಹಚರ ವಿಶಾಲ್ ನನ್ನು ಒಂದೇ ಗಂಟೆಯಲ್ಲಿ ಬಂಧನ ಮಾಡಿ ಕಂಬಿ ಹಿಂದೆ ತಳ್ಳಿದ ಹಳೇ ಹುಬ್ಬಳ್ಳಿ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed