Posts Slider

Karnataka Voice

Latest Kannada News

ಕೊರೋನಾ ಗೆದ್ದು ಬಂದ ‘ಪೂಜಾರ’- ಸಾರಿಗೆ ಸಿಬ್ಬಂದಿಯಿಂದ ಪುಷ್ಪವೃಷ್ಟಿ ಮಾಡಿ ಸ್ವಾಗತ

Spread the love

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಗ್ರಾಮಾಂತರ ೧ನೇ ಘಟಕದ ನಿರ್ವಾಹಕ ಡಿ.ಪಿ.ಪೂಜಾರ ಕೊರೋನಾ ವಿರುದ್ಧ ಹೋರಾಡಿ ಗೆದ್ದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಲ್ಲದೇ, ಎಲ್ಲರಿಗೂ ಮಹಾಮಾರಿ ವಿರುದ್ದ ಹೋರಾಡುವ ಹೇಗೆ ಎಂದು ಹೇಳಿ ಧೈರ್ಯ ತುಂಬಿದರು.

ಕೊರೋನಾ ಪಾಸಿಟಿವ್ ಬಂದ ತಕ್ಷಣವೇ ಮೊದಲು ಹೆದರಿದ್ದೆ. ಆದರೆ, ಅಂತಹ ರೋಗಯಿದಲ್ಲ. ಯಾವುದೇ ಕಾರಣಕ್ಕೂ ಭಯ ಬೀಳಬೇಡಿ. ಸಾಧ್ಯವಾದಷ್ಟು ಸೋಷಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಿ, ಮಾಸ್ಕಗಳನ್ನ ಬಳಕೆ ಮಾಡುವಂತೆ ನಿರ್ವಾಹಕ ಪೂಜಾರ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿಗಳು ಮಿತ್ರರು ಸೇರಿ ಪುಷ್ಪ ಎರಚಿ ಚಪ್ಪಾಳೆ ತಟ್ಟುವ ಮೂಲಕ ಶುಭಾಶಯ ತಿಳಿಸಿ ಸಹೋದ್ಯೋಗಿಯನ್ನು ಕರ್ತವ್ಯ ಕಳುಹಿಸಿಕೊಡಲಾಯಿತು. ಘಟಕ ವ್ಯವಸ್ಥಾಪಕ ಎಸ್.ಆರ್.ಒಡೆಯರ ಹಾಗೂ ಸಹಾಯಕ ಸಂಚಾರಿ ಅಧೀಕ್ಷಕ ಮುನ್ನಾ, ಶರಣಬಸವ, ಬಿ.ಆರ್.ಟಿ.ಎಸ್ ಉಸ್ತವಾರಿ ಕುರ್ತಕೋಟಿ ಸಿಬ್ಬಂದಿಗಳಾದ ಈಶ್ವರಗೌಡ ಚನ್ನಪ್ಪಗೌಡ್ರ. ಜಿ.ಬಿ.ಅಂಗಡಿ, ಕೃಷ್ಣ ಪೂಜಾರ, ಎಸ್.ಸಿ.ಹೊನ್ನಾಪುರ, ಶಂಕರ ಜಮ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭಾಶಯ ತಿಳಿಸಿದರು.


Spread the love

Leave a Reply

Your email address will not be published. Required fields are marked *