Posts Slider

Karnataka Voice

Latest Kannada News

ಯಮನೂರಿನ ಹಿರಿಯ ಜೀವ ನೀಲವ್ವ ಹಿರೇಮಠ ಇನ್ನಿಲ್ಲ: ಅಂತ್ಯಕ್ರಿಯೆ ನಾಳೆ

Spread the love

ನವಲಗುಂದ: ತಾಲ್ಲೂಕಿನ ಯಮನೂರು ಗ್ರಾಮದ ನಿವಾಸಿ, ವೀರಶೈವ ಸಮಾಜದ ಹಿರಿಯರಾದ ನೀಲವ್ವ ಬಸಯ್ಯ ಹಿರೇಮಠ (78) ಬುಧವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು.

ಮೂವರು ಪುತ್ರರು ಹಾಗೂ ಅಪಾರ ಬಂಧು- ಬಳಗ ಅಗಲಿರುವ ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ ನಡೆಯಲಿದೆ.

ನೀಲವ್ವ ಹಿರೇಮಠ, ಗ್ರಾಮದ ಪ್ರತಿಯೊಬ್ಬರಲ್ಲೂ ಒಳ್ಳೆಯ ಬಾಂಧವ್ಯನ್ನಿಟ್ಟುಕೊಂಡಿದ್ದರು. ಇವರನ್ನ ನೋಡಿದ ಪ್ರತಿಯೊಬ್ಬರು ಗೌರವದಿಂದ ನಡೆದುಕೊಳ್ಳುತ್ತಿದ್ದರು. ಹೀಗಾಗಿ ಹಿರಿಯ ಜೀವದ ಸಾವು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.


Spread the love

Leave a Reply

Your email address will not be published. Required fields are marked *