Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಇಲ್ಲಾ ನೈಟ್ ಕರ್ಪ್ಯೂ..…!

Spread the love

ಬೆಂಗಳೂರು: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ 8 ಜಿಲ್ಲೆಗಳಲ್ಲಿ ಇದೇ ಶನಿವಾರ ರಾತ್ರಿ 10. ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಪೂ ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಂವಾದ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇದೇ ಎಪ್ರಿಲ್ 10 ರಿಂದ ಎಪ್ರಿಲ್ 20 ರವರೆಗೆ ರಾಜ್ಯದ ಕಲಬುರ್ಗಿ, ತುಮಕೂರು, ಉತ್ತರ ಕನ್ನಡ, ಬೆಂಗಳೂರು, ಮೈಸೂರು, ಬೀದರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ಜಾರಿಗೆ ತರಲಾಗುತ್ತಿದೆ. 

ರಾಜ್ಯದ ,8 ಜಿಲ್ಲೆಗಳಲ್ಲಿ ರಾತ್ರಿ ವೇಳೆ ಜನ ಓಡಾಟ ನಡೆಸಿದರೆ ಅವರ ಮೇಲೆ ಕಠಿಣ ಕ್ರಮ ಹೇರಲಾಗುವುದು. ಆದರೆ ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂದ ಇಲ್ಲವೆಂದು ಸಿಎಂ ತಿಳಿಸಿದರು. 

ಏಪ್ರಿಲ್ 11 ಜ್ಯೋತಿಬಾಯಿ ಪುಲೆ ಜಯಂತಿಯಿಂದ ಏಪ್ರಿಲ್ 14 ರ ಅಂಬೇಡ್ಕರ ಜಯಂತಿವರೆಗೆ ಲಸಿಕೆ ಉತ್ಸವ ನಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.  


Spread the love

Leave a Reply

Your email address will not be published. Required fields are marked *