“ನೀರಸಾಗರದಲ್ಲಿ ನೀರುಪಾಲಾದ” ಹುಬ್ಬಳ್ಳಿಯ 18ವರ್ಷದ ಆಟೋ ಚಾಲಕ…!

ಕಲಘಟಗಿ: ರಜಾ ದಿನವನ್ನ ಮಜಾ ಮಾಡಲು ಗೆಳೆಯರೊಂದಿಗೆ ಬಂದಿದ್ದ ಆಟೋ ಚಾಲಕನೋರ್ವ ಕೋಡಿಯ ನೀರಿನಲ್ಲಿ ಮುಳುಗಿರುವ ಘಟನೆ ತಾಲೂಕಿನ ನೀರಸಾಗರದಲ್ಲಿ ಸಂಭವಿಸಿದೆ.

ಹುಬ್ಬಳ್ಳಿ ಆನಂದನಗರದ ಪೃಥ್ವಿ ಎಂಬ ಆಟೋ ಚಾಲಕನೇ ನೀರಿನಲ್ಲಿ ಮುಳುಗಿದ್ದು, ಆತನಿಗಾಗಿ ಹುಡುಕಾಟ ಆರಂಭವಾಗಿದೆ. ತನ್ನ ಗೆಳೆಯರೊಂದಿಗೆ, ರವಿವಾರವಾಗಿದ್ದರಿಂದ ಬೆಳಿಗ್ಗೆ ನೀರಸಾಗರಕ್ಕೆ ಹೋಗಿದ್ದ, ಈ ಸಮಯದಲ್ಲಿ ದುರ್ಘಟನೆ ನಡೆದಿದೆ.

ನೀರಸಾಗರದಲ್ಲಿನ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನ ನೀಡಲಾಗಿದ್ದು, ಆಟೋ ಚಾಲಕ ಪೃಥ್ವಿಗಾಗಿ ಹುಡುಕಾಟ ಆರಂಭವಾಗಿದ್ದು, ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ.