ಉಕ್ರೇನದಿಂದ ಕನ್ನಡಿಗ ನವೀನ ಶವ ಹುಟ್ಟೂರಿಗೆ: ಮಗನ ಕಳೆದುಕೊಂಡ ಪಾಲಕರು ಏನಂತಾರೆ..

ಹಾವೇರಿ: ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಕನ್ನಡಿಗ ನವೀನ ಶವ 21 ದಿನಗಳ ನಂತರ ಮಗನ ಮೃತ ದೇಹ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಕರು, ನೋವಿನಲ್ಲೂ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಏನು ಮಾತನಾಡಿದ್ರು, ಇಲ್ಲಿದೆ ನೋಡಿ..
ಮೃತ ನವೀನ ತಾಯಿ ವಿಜಯಲಕ್ಷ್ಮಿ ಹೇಳಿಕೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸದಲ್ಲಿ ಹೇಳಿಕೆ.
ಮಗನ ಮೃತದೇಹ ಬರುತ್ತದೆ ಎಂಬ ವಿಶ್ವಾಸ ಇತ್ತು.
ಮಗನ ಮೃತದೇಹ ಬರುತ್ತಿರುವುದು ಸಮಾಧಾನ ಆಗಿದೆ.
ಸೋಮವಾರ ಬೆಳಿಗ್ಗೆ ಮಗನ ಮೃತದೇಹ ಬರಲಿದೆ.
ಮರಳಿ ಮಣ್ಣಿಗೆ ಎಂಬಂತೆ ಮಗನ ಮೃತದೇಹ ಮರಳಿ ಮನೆಗೆ ಬರುತ್ತಿದೆ.
ಮಗನ ಮೃತದೇಹ ತರಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ ನವೀನ ತಾಯಿ ವಿಜಯಲಕ್ಷ್ಮಿ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ.
ಖಾರ್ಕೀವ್ ನಲ್ಲಿ ನಾಲ್ಕನೆ ವರ್ಷದ ಎಂಬಿಬಿಎಸ್ ಓದುತ್ತಿದ್ದ ನವೀನ.
ಮೃತ ನವೀನ ತಂದೆ ಶೇಖರಗೌಡ ಹೇಳಿಕೆ
ಮಗನ ಪಾರ್ಥೀವ ಶರೀರ ಬರುವುದು ತಡವಾದಾಗ ನಿರಾಶೆ ಆಗಿತ್ತು..
ಮಗನ ಪಾರ್ಥೀವ ಶರೀರ ಬರುವ ವಿಚಾರ ಕೇಳಿದ ನಂತರ ನಿರಾಶೆ ದೂರವಾಗಿದೆ.
ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ನೀಡಲು ನಿರ್ಧರಿಸಲಾಗಿದೆ.
ಸೋಮವಾರ ಬೆಳಿಗ್ಗೆ ೯ ಗಂಟೆ ಚಳಗೇರಿ ಗ್ರಾಮದ ಮನೆಗೆ ಮೃತದೇಹ ಬರುವ ಮಾಹಿತಿ ದೊರೆತಿದೆ. 21 ದಿನಗಳಿಗೆ ಮಗನ ಪಾರ್ಥೀವ ಶರೀರ ಬರಲಿದೆ.
ಮಗನ ಪಾರ್ಥೀವ ಶರೀರ ಮನೆಗೆ ಬರುವಂತೆ ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳು.
ಮಗನ ಪಾರ್ಥೀವ ಶರೀರ ಮನೆಗೆ ಬಂದ ನಂತರ ಮನೆಯಲ್ಲಿ ಪೂಜೆ ಸಲ್ಲಿಸಿ ಮೆಡಿಕಲ್ ಕಾಲೇಜಿಗೆ ಮಗನ ಪಾರ್ಥಿವ ಶರೀರ ಡೊನೇಟ್ ಮಾಡಲಾಗುವುದು.
ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗಲೆಂದು ಮಗನ ಮೃತದೇಹ ಡೊನೇಟ್ ಮಾಡಲು ನಿರ್ಧರಿಸಲಾಗಿದೆ.