Posts Slider

Karnataka Voice

Latest Kannada News

ಮೂರು ಸ್ಕೂಟಿ ಆರು “ಹುಬ್ಬಳ್ಳಿ ನವನಗರದ” ಯುವಕರು: ಶಿರ್ಲೆ ಪಾಲ್ಸ್ ಬಳಿ ನಾಪತ್ತೆ…!

Spread the love

ಉತ್ತರಕನ್ನಡ: ಹುಬ್ಬಳ್ಳಿಯ ನವನಗರದಿಂದ ಪ್ರವಾಸ ಸ್ಥಳ ನೋಡಲು ಬಂದಿದ್ದ ಆರು ಯುವಕರು ನಿನ್ನೆಯಿಂದಲೇ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಯಲ್ಲಾಪುರ ಠಾಣೆಯ ಪೊಲೀಸರು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯನ್ನ ನಡೆಸುತ್ತಿದ್ದಾರೆ.

ನಿನ್ನೆ ನವನಗರದಿಂದ ಹೋಗಿದ್ದ ಆಸೀಫ ಮಕಬುಲಸಾಬ ಡಾಲಾಯಿತ್, ಅಹ್ಮದ ಸೈಯ್ಯದ ಶೇಖ, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ ಮುಲ್ಲಾನವರ ಎಂಬುವವರೇ ನಾಪತ್ತೆಯಾಗಿದ್ದಾರೆ.

ನಿನ್ನೆ ದಿನ ಯಲ್ಲಾಪುರ ಸಮೀಪದ ಶಿರ್ಲೆ ಪಾಲ್ಸ್ ಬಳಿಯಲ್ಲಿ ಇವರ ಮೂರು ಸ್ಕೂಟಿಗಳು ಸಿಕ್ಕಿದ್ದು, ಯುವಕರು ನಾಪತ್ತೆಯಾಗಿದ್ದಾರೆ. ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಯಲ್ಲಾಪುರ ಠಾಣೆಯ ಇನ್ಸಪೆಕ್ಟರ್ ಸುರೇಶ ಯಳ್ಳೂರು, ಹುಡುಕಾಟ ಆರಂಭಿಸಿದ್ದು, ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಇಂದು ಬೆಳಿಗ್ಗೆಯಿಂದ ಡಿಎಸ್ಪಿ ರವಿ ನಾಯಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯನ್ನ ಆರಂಭಿಸಿದ್ದು, ಯುವಕರ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *