ನವನಗರದ ಕರ್ನಾಟಕ ಸರ್ಕಲ್ ಬಳಿ ಅಡುಗೆ ಅನಿಲ ಸೋರಿಕೆ: ಸ್ಥಳೀಯರಲ್ಲಿ ಆತಂಕ
1 min readಹುಬ್ಬಳ್ಳಿ: ರಸ್ತೆ ಕಾಮಗಾರಿ ನಡೆಸುವ ವೇಳೆಯಲ್ಲಿ ಅಡುಗೆ ಅನಿಲದ (ಗ್ಯಾಸ್ ಸಿಲಿಂಡರ್) ಪೈಪ್ ಲೈನ್ ಸೋರಿಕೆಯಾಗಿ ದೊಡ್ಡ ಪ್ರಮಾಣದಲ್ಲಿ ಅಡುಗೆ ಅನಿಲ(ಗ್ಯಾಸ್ ಸಿಲಿಂಡರ್) ವಾಸನೆ ಹಾಗೂ ದೂಳು ತುಂಬಿದ ಘಟನೆ ನವನಗರದ ಕರ್ನಾಟಕ ಸರ್ಕಲ್ ಬಳಿ ನಡೆದಿದೆ.
ಇನ್ನೂ ಮನೆಗೆ 24×7 ಅಡುಗೆ ಅನಿಲ ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದ್ದು,ಕಾಮಗಾರಿ ವೇಳೆಯಲ್ಲಿ ಸೋರಿಕೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಸೋರಿಕೆಯನ್ನು ತಡೆಯುವ ಕಾರ್ಯಕ್ಕೆ ಮುಂದಾಗಿದೆ.