ನವಲೂರಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿಲ್ಲ…!

ಧಾರವಾಡ: ತಾಲೂಕಿನ ನವಲೂರು ಗ್ರಾಮದಲ್ಲಿ ದಾಯಾದಿಗಳು ಜಮೀನು ಕಂಪೌಂಡ ಕಟ್ಟುವ ಸಂಬಂಧವಾಗಿ ಬಡಿದಾಡಿಕೊಂಡ ಘಟನೆ ನಡೆದಿದ್ದು, ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಯ್ಯ ಹಿರೇಮಠ ಹಾಗೂ ಶಕುಂತಲಾ ಹಿರೇಮಠ ಎಂಬುವವರು ತಮ್ಮ ಹೊಲದಲ್ಲಿದ್ದಾಗ, ಚಂದ್ರಶೇಖರ ಹಿರೇಮಠ ಎನ್ನುವವರು ಬಂದು ಬಡಿದಾಡಿದ್ದಾರೆ. ಇದರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಬಡಿದಾಡಿಕೊಂಡ ವೀಡಿಯೋ ವೈರಲ್ ಆಗಿದೆ.
ನವಲೂರು ಗ್ರಾಮಕ್ಕೆ ಅಂಟಿಕೊಂಡಿರುವ ತಮ್ಮ ಹೊಲಕ್ಕೆ ಹಾಕಿರುವ ತಂತಿ ಬೇಲಿಯನ್ನ ತೆಗೆದು, ಕಂಪೌಂಡ ಕಟ್ಟಿಕೊಳ್ಳಿ ಎಂದು ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ.
ಘಟನೆಯ ಸಂಬಂಧ ದೂರು ದಾಖಲು ಮಾಡಿಕೊಂಡಿರುವ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.