ನವಲಗುಂದ- ಅಣ್ಣಿಗೇರಿ ಠಾಣೆ ಪೊಲೀಸರ ಮಾನವೀಯತೆ: ನಿರ್ಗತಿಕರಿಗೆ ಸಹಾಯ ಮಾಡಿದ ಆರಕ್ಷಕ ಮನಸ್ಸುಗಳು…!

ನವಲಗುಂದ: ಕೊರೋನಾ ಸಾಂಕ್ರಾಮಿಕ ರೋಗ ಹಲವರ ಬದುಕಿಗೆ ರೋಗವಾಗಿಯೂ, ಕೆಲವರ ಜೀವನಕ್ಕೆ ಕೆಲಸವಿಲ್ಲವಾಗಿಯೂ ಕಾಡಿದ್ದು ಕಂಡು ಬರುತ್ತಿದೆ. ಹಾಗಾಗಿಯೇ, ಕೈಲ್ಲಿದ್ದವರೂ ಸಹಾಯ ಮಾಡಲು ಮುಂದಾಗುತ್ತಿರುವುದು ಮಾನವೀಯ ಕಾಳಜಿಯನ್ನ ತೋರಿಸುತ್ತದೆ.

ಇಂತಹ ಮಾನವೀಯತೆಗೆ ಮುಂದಾಗಿದ್ದು ನವಲಗುಂದ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿಎಸ್ಐ ಜಯಪಾಲ ಪಾಟೀಲ ಮತ್ತು ಅಣ್ಣಿಗೇರಿ ಠಾಣೆಯ ಪಿಎಸ್ಐ ಲಾಲಸಾಬ ಜೂಲಕಟ್ಟಿ ಅವರು.

ಹೌದು.. ತಮ್ಮ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಜೀವನಕ್ಕಾಗಿ ಪರದಾಟ ನಡೆಸಿದ ಹಲವು ಕುಟುಂಬಗಳಿಗೆ ಕಿಟ್ ನೀಡುವ ಮೂಲಕ, ತಮ್ಮಲ್ಲಿರುವ ಅಂತಃಕರಣವನ್ನ ತೋರಿಸಿಕೊಟ್ಟಿದ್ದಾರೆ.

ವೃತ್ತ ನಿರೀಕ್ಷಕರ ಚಂದ್ರಶೇಖರ ಮಠಪತಿ ಮತ್ತು ಪಿಎಸ್ಐಗಳ ಕಾರ್ಯವನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರು ಪ್ರಶಂಸಿದ್ದಾರೆ.